Home » ಆಸಿಡ್‌ ದಾಳಿ ಸಂತ್ರಸ್ತರಿಗಿನ್ನು ಮಾಸಿಕ ರೂ.50000 ಪಿಂಚಣಿ; ಎಲ್ಲರಿಗೂ ವಸತಿ ಸೌಲಭ್ಯ; ಸಚಿವ ಪರಮೇಶ್ವರ್‌

ಆಸಿಡ್‌ ದಾಳಿ ಸಂತ್ರಸ್ತರಿಗಿನ್ನು ಮಾಸಿಕ ರೂ.50000 ಪಿಂಚಣಿ; ಎಲ್ಲರಿಗೂ ವಸತಿ ಸೌಲಭ್ಯ; ಸಚಿವ ಪರಮೇಶ್ವರ್‌

0 comments
Dr G Parameshwar

ರಾಜ್ಯದಲ್ಲಿ ಆಸಿಡ್‌ ದಾಳಿಗೊಳಗಾದ ಸಂತ್ರಸ್ತರಿಗೆ ಇಲ್ಲಿಯವರೆಗೆ ದೊರಕುತ್ತಿದ್ದ ರೂ.10000 ಮಾಸಿಕ ಪಿಂಚಣಿಯನ್ನು ಇದೀಗ ರಾಜ್ಯ ಸರಕಾರ ತಲಾ ರೂ.50000 ಗಳಿಗೆ ಏರಿಕೆ ಮಾಡಿದೆ.

ಅಲ್ಲದೇ ಎಲ್ಲಾ 169 ಸಂತ್ರಸ್ತರಿಗೂ ವಸತಿ ಸೌಲಭ್ಯ, ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ, ಐದು ಲಕ್ಷ ರೂ. ಪ್ರತ್ಯೇಕ ನೆರವು ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಘೋಷಣೆ ಮಾಡಿದ್ದಾರೆ. ಜೊತೆಗೆ ಆಸಿಡ್‌ ಮಾರಾಟದ ಮೇಲೆ ನಿರ್ಬಂಧ ಹೇರುವುದಕ್ಕೂ ಕ್ರಮ ಕೈಗೊಳ್ಳುವುದು ಎಂದು ಹೇಳಿದ್ದಾರೆ.

ರಾಜ್ಯದ ಯಾವುದೇ ಸರಕಾರಿ ಅಥವಾ ಸರಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಆಸಿಡ್‌ ದಾಳಿ ಸಂತ್ರಸ್ತರಿಗೆ ಸಂಪೂರಣ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಬೇಕೆನ್ನುವುದು ನಿಯಮವಿದ್ದು, ಇದರಲ್ಲಿ ಶಸ್ತ್ರಚಿಕಿತ್ಸೆ ಔಷಧಿಗಳು ಮತ್ತು ದೀರ್ಘಕಾಲಿನ ಪುನರ್ವಸತಿ ವೆಚ್ಚಗಳು ಸೇರಿವೆ ಎಂದು ಹೇಳಿದರು.

ಅಲ್ಲದೇ ಸದ್ಯಕ್ಕೆ 54 ಸಂತ್ರಸ್ತರಿಗೆ ಮಾಸಿಕ ರೂ.10 ಸಾವಿರ ನೀಡಲಾಗುತ್ತಿದೆ. ಮಾಸಿಕ ರೂ.50ಸಾವಿರ ಏರಿಕೆ ಮಾಡಿ ನೀಡಲಾಗುವುದು. ರಾಜೀವ ಗಾಂಧಿ ವಸತಿ ನಿಗಮ, ಸ್ಪಂ ಬೋರ್ಡ್‌ನಿಂದ ಸಂತ್ರಸ್ತರು ವಾಸಿಸುತ್ತಿರುವ ಪ್ರದೇಶದಲ್ಲಿಯೇ ಉಚಿತ ಮನೆ ನೀಡಲಾಗುವುದು ಇಲ್ಲಿಯವರೆಗೆ ಸ್ವಯಂ ಉದ್ಯೋಗಕ್ಕೆಂದು ಗೆಳತಿ ಯೋಜನೆಯಡಿ 5 ಲಕ್ಷ ರೂ. ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿತ್ತು. ಇದೀಗ 5 ಲಕ್‌ ರೂ.ಗಳ ಪ್ರತ್ಯೇಕ ನೆರವು ನೀಡಲಾಗುವುದು. ಇದನ್ನು ವಾಪಸ್‌ ಸರಕಾರಕ್ಕೆ ಪಾವತಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

banner

You may also like