Home » ಮಂಗಳೂರು: ನಂತೂರು ಸರ್ಕಲ್‌ ಬಳಿ ಖಾಸಗಿ ಬಸ್‌ ಡಿಕ್ಕಿ ಸಹಸವಾರೆ ಮೃತಪಟ್ಟ ಪ್ರಕರಣ: ಪ್ರತಿಭಟನೆ ಮಾಡಿದವರ ಮೇಲೆ ಪ್ರಕರಣ ದಾಖಲು

ಮಂಗಳೂರು: ನಂತೂರು ಸರ್ಕಲ್‌ ಬಳಿ ಖಾಸಗಿ ಬಸ್‌ ಡಿಕ್ಕಿ ಸಹಸವಾರೆ ಮೃತಪಟ್ಟ ಪ್ರಕರಣ: ಪ್ರತಿಭಟನೆ ಮಾಡಿದವರ ಮೇಲೆ ಪ್ರಕರಣ ದಾಖಲು

0 comments

ಮಂಗಳೂರು: ನಂತೂರು ಸರ್ಕಲ್‌ ಬಳಿ ಖಾಸಗಿ ಬಸ್‌ ಡಿಕ್ಕಿಯಾಗಿ ಸ್ಕೂಟರ್‌ ಸಹಸವಾರೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕದ್ರಿ ಟ್ರಾಫಿಕ್‌ ಪೊಲೀಸ್‌ ಠಾಣೆ ಎದುರು ಬಸ್‌ ಚಾಲಕನ ವಿರುದ್ಧ ಕ್ರಮಕ್ಕೆ ಪ್ರತಿಭಟನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಮಿತ್‌ ವಿವೇಕನಗರ ಬಲ್ಲಾಳ್‌ ಭಾಗ್‌, ಕೀರ್ತನ್‌ ವಿವೇಕನಗರ ಬಲ್ಲಾಳ್‌ ಭಾಗ್‌, ನವೀತ್‌ ವಿವೇಕನಗರ, ಬಲ್ಲಾಳ್‌ ಭಾಗ್‌, ಭರತ್‌ರಾಜ್‌ ವಿವೇಕನಗರ ಬಲ್ಲಾಳ್‌ ಭಾಗ್‌, ಪವನ್‌ ವಿವೇಕನಗರ ಬಲ್ಲಾಳ್‌ ಭಾಗ್‌, ಲೋಕೇಶ್‌ ಮಂಗಳಾದೇವಿ, ಮನ್ವೀತ್‌ ಬಲ್ಲಾಳ್‌ಭಾಗ್‌, ಅನಿಲ್‌ ಕುಮಾರ್‌ ಕಂಕನಾಡಿ, ಪ್ರೇಮನಾಥ ಬಲ್ಲಾಳ್‌ ಭಾಗ್‌ ಮತ್ತು ಇತರರ ಮೇಲೆ ಅಕ್ರಮಕೂಟ ಸೇರಿ ಸಾರ್ವಜನಿಕರಿಗೆ ತೊಂದರೆ ಹಾಗೂ ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

You may also like