Mangaluru : ಕೊಲ್ಲಿ ರಾಷ್ಟ್ರಗಳಲ್ಲಿ ಊಟ ಆಗಿರುವ ಯುದ್ಧದ ವಾತಾವರಣ ಪ್ರಪಂಚದಾದ್ಯಂತ ಪ್ರತಿಯೊಂದು ಅಗತ್ಯ ವಸ್ತುಗಳ ಮೇಲೆಯೂ ಪರಿಣಾಮ ಬೀರುತ್ತದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆದ ಒಂದು ಯುದ್ಧದ ಛಾಯೆ ಜಗತ್ತಿನಲ್ಲಿರುವ ಅನೇಕ ರಾಷ್ಟ್ರಗಳ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರಿದೆ. ಜನರು ತತ್ತರಿಸುವಂತೆ ಮಾಡಿದೆ. ಈಗಾಗಲೇ ಎಲ್ಪಿಜಿ ಸಿಲಿಂಡರ್, ಇಂಧನ ಸೇರಿದಂತೆ ಅನೇಕ ವಿಚಾರಗಳಲ್ಲಿ ಪೆಟ್ಟು ತಿಂದಿರುವ ಜನರು ಇದೀಗ ಮೀನಿನ ವ್ಯಾಪಾರದ ವಿಚಾರದಲ್ಲಿಯೂ ಕೂಡ ಆತಂಕ ಪಡುವ ಸ್ಥಿತಿ ಎದುರಾಗಿದೆ. ಯಾಕೆಂದರೆ ಮಂಗಳೂರಿನಲ್ಲಿ ಮೀನಿನ ದರ ಪಾತಾಳಕ್ಕೆ ಕುಸಿದಿದೆ.

ಯಸ್, ಯುದ್ಧದ ಪ್ರಭಾವದಿಂದ ಮೀನುಗಾರಿಕೆ ಉದ್ಯಮ ತೀವ್ರ ಸಂಕಷ್ಟದಲ್ಲಿದೆ. ಕರಾವಳಿ ಮೀನುಗಾರರು, ವಿಶೇಷವಾಗಿ ಮಹಿಳೆಯರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಹೋಟೆಲ್ಗಳ ಮುಚ್ಚುಗಡೆ, ರಫ್ತು ಸ್ಥಗಿತ ಮತ್ತು LPG ವ್ಯತ್ಯಯದಿಂದ ಮೀನಿನ ದರ ಪಾತಾಳಕ್ಕೆ ಕುಸಿದಿದ್ದು, ಲಕ್ಷಾಂತರ ರೂಪಾಯಿ ವಹಿವಾಟು ಸ್ಥಗಿತಗೊಂಡಿದೆ. ಈ ಬಿಕ್ಕಟ್ಟು ಮೀನುಗಾರರ ಜೀವನಾಡಿಗೇ ಸವಾಲಾಗಿದೆ.
ರಫ್ತು ರದ್ದಾಗಿರುವ ಹಿನ್ನೆಲೆ ಹಾಗೂ ಅಡುಗೆ ಅನಿಲದ (LPG) ವ್ಯತ್ಯಯ ಮತ್ತು ಯುದ್ಧದ ಪ್ರಭಾವದಿಂದಾಗಿ ಪ್ರತಿದಿನ ಮೀನು ಊಟದ ಹೋಟೆಲ್ಗಳು ಮುಚ್ಚುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಪ್ರತಿ ಮೀನಿನ ದರದಲ್ಲಿ ಸುಮಾರು 100 ರಿಂದ 200 ರೂಪಾಯಿ ಇಳಿಕೆಯಾಗಿದೆ. ಮೀನುಗಾರ ಮಹಿಳೆಯರಿಗೆ ಅಸಲು ಕೂಡ ಸಿಗದಂತಾಗಿದ್ದು, ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಹೋಟೆಲ್ ಮಾಲೀಕರು ಮಾರುಕಟ್ಟೆಗೆ ಬಾರದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ವಹಿವಾಟು ಸ್ಥಗಿತಗೊಂಡಿದೆ.


