Home News KK Mohammed : ಅಯೋಧ್ಯೆ ಮಾತ್ರವಲ್ಲ, ಮುಸ್ಲೀಮರು ಈ ಎರಡು ಸ್ಥಳಗಳನ್ನೂ ಬಿಟ್ಟುಕೊಟ್ರೆ ಒಳ್ಳೇದು –...

KK Mohammed : ಅಯೋಧ್ಯೆ ಮಾತ್ರವಲ್ಲ, ಮುಸ್ಲೀಮರು ಈ ಎರಡು ಸ್ಥಳಗಳನ್ನೂ ಬಿಟ್ಟುಕೊಟ್ರೆ ಒಳ್ಳೇದು – ಎಎಸ್‌ಐ ಮಾಜಿ ನಿರ್ದೇಶಕ ಕೆ.ಕೆ. ಮುಹಮ್ಮದ್ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

K K Mohammed : ಮುಸ್ಲಿಮರ ವಶದಲ್ಲಿದ್ದ ಅಯೋಧ್ಯ ರಾಮ ಜನ್ಮಭೂಮಿಯನ್ನು, ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಹಿಂದುಗಳು ವಶಪಡಿಸಿಕೊಂಡು ಇದೀಗ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಿಸಲಾಗಿದೆ. ಈ ಬೆನ್ನಲ್ಲೇ ಎ ಎಸ್ ಐ ಮಾಜಿ ನಿರ್ದೇಶಕ ಕೆಕೆ ಮೊಹಮ್ಮದ್ ಅವರು ‘ಅಯೋಧ್ಯ ಮಾತ್ರವಲ್ಲ, ಮುಸ್ಲಿಮರು ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್ಟುಕೊಟ್ಟರೆ ಒಳ್ಳೆಯದು’ ಎಂಬುದಾಗಿ ಹೇಳಿಕೆಯನ್ನು ನೀಡಿದ್ದಾರೆ.

ಕೇರಳದ ಕೋಝಿಕ್ಕೋಡ್ ನಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕೆ.ಕೆ. ಮುಹಮ್ಮದ್, ‘ನನ್ನ ಪ್ರಕಾರ ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಅವುಗಳೆಂದರೆ ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾ ಮತ್ತು ಶಿವನೊಂದಿಗೆ ಸಂಬಂಧ ಹೊಂದಿರುವ ಜ್ಞಾನವಾಪಿ ದೇಗುಲಗಳಾಗಿವೆ. ಭವ್ಯವಾದ ಹಿಂದೂ ದೇವಾಲಯಗಳನ್ನು ನಿರ್ಮಿಸಲು ಮುಸ್ಲಿಮರು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಬೇಕಾದ ಎರಡು ಪ್ರಮುಖ ಸ್ಥಳಗಳು ಇವು ಎಂದು ಹೇಳಿದ್ದಾರೆ.

ಅಲ್ಲದೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ದೇಶ ಪಾಕಿಸ್ತಾನವನ್ನು ನೀಡಿದ ನಂತರವೂ, ಭಾರತ ಇಂದು ಜಾತ್ಯತೀತ ದೇಶವಾಗಿದ್ದರೆ, ಅದು ಹಿಂದೂ ಬಹುಮತದ ಕಾರಣದಿಂದಾಗಿ ಮಾತ್ರ ಎಂಬ ಅಂಶವನ್ನು ಮುಸ್ಲಿಮರು ಪ್ರಶಂಸಿಸಬೇಕು. ಅದು ಮುಸ್ಲಿಂ ಬಹುಮತದ ದೇಶವಾಗಿದ್ದರೆ, ಅದು ಎಂದಿಗೂ ಜಾತ್ಯತೀತ ದೇಶವಾಗುತ್ತಿರಲಿಲ್ಲ. ಆದ್ದರಿಂದ, ಈ ಸಂಗತಿಯನ್ನು ಮುಸ್ಲಿಮರು ಸಹ ಅರಿತುಕೊಳ್ಳಬೇಕು ಮತ್ತು ಅವರು ಅದನ್ನು ಅರ್ಥಮಾಡಿಕೊಳ್ಳಬೇಕು. ಅವರ ಕಡೆಯಿಂದ ಕೆಲವು ಸನ್ನೆಗಳು ಇರಬೇಕು ಎಂದರು.