Home News Kamalakar Bhat: ‘ಕಡ್ಲೆಪುರಿ ವ್ಯಾಪಾರಿ’ ಕಮಲಾಕರ್ ಭಟ್ ಜ್ಯೋತಿಷಿ ಆಗಿದ್ದೇಗೆ?

Kamalakar Bhat: ‘ಕಡ್ಲೆಪುರಿ ವ್ಯಾಪಾರಿ’ ಕಮಲಾಕರ್ ಭಟ್ ಜ್ಯೋತಿಷಿ ಆಗಿದ್ದೇಗೆ?

Hindu neighbor gifts plot of land

Hindu neighbour gifts land to Muslim journalist

Kamalakar Bhat : ಅನೈತಿಕ ಸಂಬಂಧ ಮತ್ತು ಕೊ*ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ ಭಟ್‌ ಅವರ ಕಥೆ ದಿನದಿಂದ ದಿನಕ್ಕೆ ಒಂದೊಂದಾಗಿ ಹೊರಬರುತ್ತಿದೆ. ಇದೀಗ ಈ ಕಲಾಕಾರರಾಗಿರುವ ಕಮಲಾಕರ ಭಟ್ಟ ಅವರು ಜ್ಯೋತಿಷಿ ಆಗುವ ಮುಂಚೆ ಕಡ್ಲೆಪುರಿ ವ್ಯಾಪಾರಿ ಆಗಿದ್ದ ಎಂಬುದು ತಿಳಿದು ಬಂದಿದೆ.

ಉತ್ತರ ಕನ್ನಡದ ಸಿದ್ದಾಪುರದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಜ್ಯೋತಿಷಿ ಕಮಲಾಕರ ಭಟ್ ಅವರ ನಿಗೂಢ ಹಿನ್ನೆಲೆ ಮತ್ತು ಸಂಪತ್ತಿನ ಬಗ್ಗೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಕೂಡ ಹುಟ್ಟಿಕೊಂಡಿವೆ. ಸಾಮಾನ್ಯ ವ್ಯಕ್ತಿಯಾಗಿ ವೀಳ್ಯದೆಲೆ ಮತ್ತು ಕಡ್ಲೆಪುರಿ ಮಾರಾಟ ಮಾಡುತ್ತಿದ್ದ ಕಮಲಾಕರ ಭಟ್ ಕೋಟ್ಯಧಿಪತಿ ಜ್ಯೋತಿಷಿಯಾಗಿದ್ದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಯಸ್, ಎಲೆ ಹಾಗೂ ಕಡ್ಲೆ ಪುರಿ ಮಾರಾಟ ಮಾಡ್ತಿದ್ದ ಕಮಲಾಕರ ಭಟ್ 2005ರಲ್ಲಿ ನಾಪತ್ತೆಯಾಗಿದ್ದ. ಬಳಿಕ ಕೇರಳದಲ್ಲಿ ಜ್ಯೋತಿಷಿ ಶಾಸ್ತ್ರ, ವಶೀಕರಣ ವಿದ್ಯೆ ಕಲಿತಿದ್ದನಂತೆ ಬಳಿಕ ಮತ್ತೆ ಬೆಂಗಳೂರಿಗೆ ಬಂದು ಜ್ಯೋತಿಷಿ ವೇಷ ತೊಟ್ಟು ಜನರಿಗೆ ಮಕ್ಮಲ್ ಟೋಪಿ ಆಗ್ತಿದ್ದ ಎನ್ನುವ ಮಾಹಿತಿ ಪೊಲೀಸ್ ತನಿಖೆಯಿಂದ ಹೊರ ಬಂದಿದೆ. ಇನ್ನು ಜ್ಯೋತಿಷಿಯಾಗಿದ್ದ ಕಮಲಾಕರ್​ ಭಟ್​ ಪ್ರತೀ ಜಿಲ್ಲೆಗಳಲ್ಲಿ ಬ್ರೋಕರ್‌ ಗಳನ್ನ ನೇಮಿಸಿದ್ದನಂತೆ. ಈ ವೇಳೆಯೇ ಕಮಲಾಕರ್‌ಗೆ ಸಿದ್ದಾಪುರದ ಸುಚಿತ್ರಾಳ ಪರಿಚಯವಾಗಿದೆ. ಆರಂಭದಲ್ಲಿ ಸುಚಿತ್ರಾ ಕೂಡಾ ಜ್ಯೋತಿಷಿಗೆ ಬ್ರೋಕರ್ ರೀತಿ ಕೆಲಸ ಮಾಡ್ತಿದ್ದಳು ಎನ್ನಲಾಗುತ್ತಿದೆ.

ಹೀಗೆ ಬ್ರೋಕರ್​ ಆಗಿದ್ದವಳು ಬಳಿಕ ಜ್ಯೋತಿಷಿ ಕಮಲಾಕರ್​ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು, ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರಂತೆ. ಅಷ್ಟೇ ಅಲ್ಲದೇ ಸುಚಿತ್ರಾಳನ್ನ ಮದುವೆ ಆಗಲು ಕಮಲಾಕರ್ ನಿರ್ಧರಿಸಿದ್ದ ಎನ್ನಲಾಗ್ತಿದೆ. ಆದರೆ ಇಬ್ಬರ ಮದುವೆಗೆ ಸುಚಿತ್ರಾ ಗಂಡ ಮಹೇಶ್‌ ಅಡ್ಡಿಯಾಗಿದ್ದ. ಹೀಗಾಗಿ ಇಬ್ಬರು ಸೇರಿ ಕೊಲೆಗೆ ಸಂಚು ರೂಪಿಸಿದ್ರು ಎಂಬ ಮಾಹಿತಿಯೊಂದು ಹೊರಬಿದ್ದಿದೆ.

ಇನ್ನೂ ಜ್ಯೋತಿಷಿ ಕಮಲಾಕರ್​ ಮತ್ತು ಸುಚಿತ್ರಾ ಭಟ್ ಗೆ ರೌಡಿಗಳ ನಂಟಿತ್ತು ಎನ್ನುವ ವಿಚಾರ ಕೂಡ ಬಯಲಾಗಿದೆ. ಸುಚಿತ್ರಾಳ ಒಂದೇ ಫೋನ್​ ಕಾಲ್​ಗೆ ಮೂವರು ರೌಡಿಗಳು ಎಂಟ್ರಿ ಕೊಟ್ಟಿದ್ರು. ಸುಚಿತ್ರಾಳ ಮಾತು ಕೇಳಿ ಚಾಕು ಇರಿದ ಮೂವರು ಮುಸ್ಲಿಂ ಹುಡುಗರ ಹಿನ್ನೆಲೆ ಬಗ್ಗೆ ಕೂಡ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಶಿವಮೊಗ್ಗ ಮೂಲದ ಮೈಫೂಜ್, ಫೈಜಲ್ ಮತ್ತು ಇರ್ಫಾನ್ ಕುರಿತು ತನಿಖೆ ತೀವ್ರಗೊಂಡಿದೆ. ಈ ಸುಚಿತ್ರಾ ಹಾಗೂ ಕಮಲಾಕರ ಭಟ್​​ಗೆ ಇಷ್ಟು ಕ್ಲೋಸ್ ಹೇಗಾದ್ರು‌? ಈ ಹಿಂದೆಯೂ ಈ ಗ್ಯಾಂಗ್ ನಿಂದ ಬೇರೆ ಏನಾದ್ರೂ ಕೃತ್ಯ ನಡೆದಿದೆಯಾ..? ಎನ್ನುವ ಕುರಿತು ಉತ್ತರ ಕನ್ನಡ ಮತ್ತು ಶಿವಮೊಗ್ಗ ಪೊಲೀಸರು ತನಿಖೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಕೆಲವು ಟಿವಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಪ್ರಚಾರವನ್ನು ಮಾಡಿಕೊಂಡ ಕಮಲಾಕರ ಭಟ್, ಅಲ್ಪಾವಧಿಯಲ್ಲೇ ಅಪಾರ ಜನಪ್ರಿಯತೆ ಗಳಿಸಿದರು. ಸುಮಾರು 10 ರಿಂದ 15 ವರ್ಷಗಳ ಅವಧಿಯಲ್ಲಿ ಅವರು ಕೋಟ್ಯಂತರ ರೂಪಾಯಿ ಸಂಪಾದಿಸಿ, ಬರಿಗೈಯಿಂದ ಕೋಟ್ಯಾಧಿಪತಿಯಾಗಿ ಬೆಳೆದರು. ಅವರ ಈ ಅಸಾಮಾನ್ಯ ಮತ್ತು ಅತಿ ವೇಗದ ಸಂಪಾದನೆಯು ಸಾರ್ವಜನಿಕರಲ್ಲಿ ಹಾಗೂ ಅವರ ಭಕ್ತರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಣವನ್ನು ಕೇವಲ ಜ್ಯೋತಿಷ್ಯದ ಮೂಲಕವೇ ಗಳಿಸಲಾಯಿತೇ ಅಥವಾ ಬೇರೆ ಯಾವುದೇ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದರೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.