Home News ಭಾರತ ಯುದ್ಧಕ್ಕೆ ಬಂದರೆ ಸಿಖ್ ಸೈನಿಕರು ಪಾಕ್ ಮೇಲೆ ದಾಳಿ ಮಾಡಲ್ಲ ಯಾಕೆ?

ಭಾರತ ಯುದ್ಧಕ್ಕೆ ಬಂದರೆ ಸಿಖ್ ಸೈನಿಕರು ಪಾಕ್ ಮೇಲೆ ದಾಳಿ ಮಾಡಲ್ಲ ಯಾಕೆ?

Hindu neighbor gifts plot of land

Hindu neighbour gifts land to Muslim journalist

ಇಸ್ಲಾಮಾಬಾದ್‌: ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ತೀವ್ರ ಗೊಳ್ಳುತ್ತಿದ್ದು, ಪಾಕ್ ನ ನಾಯಕರು ಒಬ್ಬರಾದ ಮೇಲೆ ಒಬ್ಬರು ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿಯುತ್ತಿದ್ದಾರೆ.

“ಅಯೋಧ್ಯೆಯಲ್ಲಿ ಹೊಸ ಬಾಬರಿ ಮಸೀದಿಯ ಇಟ್ಟಿಗೆಯನ್ನು ಪಾಕಿಸ್ಥಾನದ ಸೈನಿಕರು ಹಾಕುತ್ತಾರೆ ಮತ್ತು ಮೊದಲ ಅಜಾನ್‌’ನ್ನು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಸ್ವತಃ ನೀಡುತ್ತಾರೆ” ಎಂದು ಪಾಕಿಸ್ಥಾನದ ಸೆನೆಟ‌ರ್ ಪಲ್ವಾಶಾ ಮೊಹಮ್ಮದ್ ಜೈ ಖಾನ್ ತೀವ್ರ ಪ್ರಚೋದನಕಾರಿಯಾದ ಹೇಳಿಕೆ ನೀಡಿದ್ದಾರೆ.

ಅವರು ಮಂಗಳವಾರ ಪಾಕಿಸ್ಥಾನ ಸಂಸತ್ತನ್ನು ಉದ್ದೇಶಿಸಿ ಮಾತನಾಡಿ, ಧಾರ್ಮಿಕ ಭಾವನೆಗಳನ್ನು ಕೆಣಕುತ್ತಾ, ಭಾರತದೊಂದಿಗೆ ಸಂಘರ್ಷ ಉಂಟಾದರೆ ಸಿಖ್ ಸೈನಿಕರು ಪಾಕಿಸ್ಥಾನದ ಮೇಲೆ ದಾಳಿ ಮಾಡುವುದಿಲ್ಲ ಎಂದರು.”ಸಿಖ್ ಸೈನ್ಯವು ಪಾಕಿಸ್ಥಾನದ ಮೇಲೆ ದಾಳಿ ಮಾಡುವುದಿಲ್ಲ, ಏಕೆಂದರೆ ಇದು (ಪಾಕಿಸ್ತಾನ) ಗುರುನಾನಕ್’ರ ಪುಣ್ಯ ಭೂಮಿ” ಎಂದು ಅವರು ಹೇಳಿದ್ದಾರೆ.