Coconut: ಕೊಲ್ಲಿ ರಾಷ್ಟ್ರಗಳಲ್ಲಿ ಊಟ ಆಗಿರುವ ಯುದ್ಧದ ವಾತಾವರಣ ಪ್ರಪಂಚದಾದ್ಯಂತ ಪ್ರತಿಯೊಂದು ಅಗತ್ಯ ವಸ್ತುಗಳ ಮೇಲೆಯೂ ಪರಿಣಾಮ ಬೀರುತ್ತದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆದ ಒಂದು ಯುದ್ಧದ ಛಾಯೆ ಜಗತ್ತಿನಲ್ಲಿರುವ ಅನೇಕ ರಾಷ್ಟ್ರಗಳ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರಿದೆ. ಅದರಲ್ಲೂ ರೈತಾಪಿ ವರ್ಗದವರಿಗಂತೂ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಈಗ ಯುದ್ಧಪೀಡಿತ ದೇಶದ ರಫ್ತು ಸ್ಥಗಿತಗೊಂಡು ತೆಂಗಿನಕಾಯಿ ಬೆಲೆಯಲ್ಲಿ ತೀವ್ರ ಕುಸಿತಕಂಡಿದೆ.

ಯಸ್, ಗಲ್ಫ್ ದೇಶಗಳಲ್ಲಿನ ಪ್ರಸ್ತುತ ಯುದ್ಧ ಪರಿಸ್ಥಿತಿಯು ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲಿನ ತೆಂಗಿನಕಾಯಿ ರೈತರ ಮೇಲೆ ನೇರ ಪರಿಣಾಮ ಬೀರಿದೆ. ಯುದ್ಧದಿಂದಾಗಿ ಹಡಗು ಮಾರ್ಗಗಳು ಮುಚ್ಚಲ್ಪಟ್ಟಿದ್ದು, ರಫ್ತು ಸ್ಥಗಿತಗೊಂಡಿದೆ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆಗಳಲ್ಲಿ ಭಾರೀ ಕುಸಿತವಾಗಿದೆ.
ನಮ್ಮ ದೇಶದಿಂದ, ವಿಶೇಷವಾಗಿ ಕೇರಳ ಮತ್ತು ಕರ್ನಾಟಕ ರಾಜ್ಯಗಳಿಂದ ಕೊಲ್ಲಿ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿ ರಫ್ತಾಗುತ್ತದೆ. ಆದರೆ ಈಗ ರಫ್ತು ಸ್ಥಗಿತಗೊಂಡು ದೊಡ್ಡ ಆತಂಕವನ್ನು ಸೃಷ್ಟಿ ಮಾಡಿದೆ. ಕೇವಲ ಒಂದು ತಿಂಗಳಲ್ಲಿ ತೆಂಗಿನಕಾಯಿ ಬೆಲೆ ಅರ್ಧಕ್ಕಿಂತ ಹೆಚ್ಚು ಕುಸಿದಿದೆ. ಸಾವಿರ ಕಾಯಿ ಬೆಲೆಯಲ್ಲಿನ ಬದಲಾವಣೆಗಳನ್ನು ನೋಡಿದ್ರೆ, ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದು ನಮಗೂ ಅರ್ಥವಾಗುತ್ತದೆ. ಒಂದು ತಿಂಗಳ ಹಿಂದೆ, ಸಾವಿರ ಕಾಯಿ ಬೆಲೆ ಸುಮಾರು 22,000 ರೂ.ಗಳಷ್ಟಿತ್ತು. ಮಾರುಕಟ್ಟೆಯಲ್ಲಿ ಸಾವಿರ ಕಾಯಿ ಬೆಲೆ 12,000 ರಿಂದ 13,000 ರೂ.ಗಳಿಗೆ ಕುಸಿದಿದೆ. ಕೇವಲ 30 ದಿನಗಳಲ್ಲಿ 10,000 ರೂ.ಗಳ ಕುಸಿತವು ರೈತರಿಗೆ ದೊಡ್ಡ ಹೊಡೆತವಾಗಿದೆ.
ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ತೆಂಗಿನಕಾಯಿಯನ್ನು ಬೆಳೆಸಲಾಗುತ್ತಿದೆ. ಇತರ ರಾಜ್ಯಗಳಿಂದ ಬರುವ ಎಲ್ಲಾ ತೆಂಗಿನಕಾಯಿಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿರುವುದರಿಂದ, ತೆಂಗಿನಕಾಯಿಗೆ ಬೇಡಿಕೆ ಗಮನಾರ್ಹವಾಗಿ ಕಡಿಮೆಯಾಗಿದೆ

