Home latest ಬೇರೆ ರಾಜ್ಯದವರು ಪರಸ್ಪರ ಸಂವಹನ ನಡೆಸುವಾಗ ಹಿಂದಿಯಲ್ಲೇ ಮಾತಾಡಬೇಕು|ವಿದ್ಯಾರ್ಥಿಗಳಿಗೆ ಹಿಂದಿಯ ಪ್ರಾಥಮಿಕ ಜ್ಞಾನವನ್ನು ನೀಡುವ ಬಗ್ಗೆ...

ಬೇರೆ ರಾಜ್ಯದವರು ಪರಸ್ಪರ ಸಂವಹನ ನಡೆಸುವಾಗ ಹಿಂದಿಯಲ್ಲೇ ಮಾತಾಡಬೇಕು|ವಿದ್ಯಾರ್ಥಿಗಳಿಗೆ ಹಿಂದಿಯ ಪ್ರಾಥಮಿಕ ಜ್ಞಾನವನ್ನು ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು-ಕೇಂದ್ರ ಗೃಹ ಸಚಿವ ಅಮಿತ್ ಶಾ

Hindu neighbor gifts plot of land

Hindu neighbour gifts land to Muslim journalist

ನವದೆಹಲಿ: ಬೇರೆ ಬೇರೆ ರಾಜ್ಯದವರು ಪರಸ್ಪರ ಸಂವಹನ ನಡೆಸುವಾಗ ಹಿಂದಿಯಲ್ಲಿ ಮಾತಾಡಬೇಕೆ ಹೊರತು ಇಂಗ್ಲೀಷ್ ನಲ್ಲಿ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುವ ವೇಳೆ ಹೇಳಿದ್ದಾರೆ.

ಸರ್ಕಾರವನ್ನು ನಡೆಸುವ ಮಾಧ್ಯಮವೇ ಅಧಿಕೃತ ಭಾಷೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ.ಇದು ಖಂಡಿತವಾಗಿಯೂ ಹಿಂದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೀಗ ಸಚಿವ ಸಂಪುಟದ ಶೇ.70ರಷ್ಟು ಕಾರ್ಯಸೂಚಿ ಹಿಂದಿಯಲ್ಲಿ ಸಿದ್ಧವಾಗಿದೆ ಎಂದು ಅವರು ಸದಸ್ಯರಿಗೆ ತಿಳಿಸಿದರು.

ಅಧಿಕೃತ ಭಾಷೆಯನ್ನು ದೇಶದ ಒಗ್ಗಟ್ಟಿನ ಪ್ರಮುಖ ಭಾಗವನ್ನಾಗಿಸುವ ಸಮಯ ಬಂದಿದೆ.ಹಿಂದಿಯನ್ನು ಇಂಗ್ಲೀಷ್ ಗೆ ಪರ್ಯಾಯವನ್ನಾಗಿ ಬೆಳೆಸಬೇಕು ಆದರೆ ಸ್ಥಳೀಯ ಭಾಷೆಗಳಿಗೆ ಪರ್ಯಾಯವಾಗಿ ಅಲ್ಲ. ಬೇರೆ ಸ್ಥಳೀಯ ಭಾಷೆಗಳಿಂದ ಶಬ್ದಗಳನ್ನು ಸ್ವೀಕರಿಸುವ ಮೂಲಕ ಹಿಂದಿಯನ್ನೂ ಬೆಳೆಸಬೇಕು.ವಿವಿಧ ಭಾಷೆಗಳನ್ನು ಮಾತನಾಡುವ ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸಿದಾಗ ಅದು ಭಾರತದ ಭಾಷೆಯಲ್ಲಿ ಇರಬೇಕು ಎಂದು ಗೃಹ ಸಚಿವರು ಹೇಳಿದ್ದಾರೆ.ಅಲ್ಲದೆ ಮೂರು ಪ್ರಮುಖ ಅಂಶಗಳಿಗೆ ಅಮಿತ್ ಶಾ ಒತ್ತು ನೀಡಿದ್ದಾರೆ.

*ಸಮಿತಿಯು ತನ್ನ ವರದಿಯ 1 ರಿಂದ 11 ನೇ ಸಂಪುಟಗಳಲ್ಲಿ ಮಾಡಿದ ಶಿಫಾರಸುಗಳ ಅನುಷ್ಠಾನಕ್ಕಾಗಿ ಜುಲೈನಲ್ಲಿ ಸಭೆ ನಡೆಸುವಂತೆ ವಿನಂತಿಸಲಾಗಿದ್ದು,ಆ ಸಭೆಯಲ್ಲಿ ಸಂಪುಟವಾರು ವರದಿಯ ಅನುಷ್ಠಾನದ ಬಗ್ಗೆ ಅಧಿಕೃತ ಭಾಷಾ ಸಮಿತಿಯ ಕಾರ್ಯದರ್ಶಿ ಸದಸ್ಯರಿಗೆ ತಿಳಿಸಬೇಕು ಎಂದು ಹೇಳಿದರು.
*9 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಹಿಂದಿಯ ಪ್ರಾಥಮಿಕ ಜ್ಞಾನವನ್ನು ನೀಡುವ ಅಗತ್ಯವನ್ನು ಒತ್ತಿ ಹೇಳಿದ್ದು, ಹಿಂದಿ ಬೋಧನಾ ಪರೀಕ್ಷೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.
*ಹಿಂದಿ ನಿಘಂಟನ್ನು ಪರಿಷ್ಕರಿಸುವ ಮೂಲಕ ಮರುಪ್ರಕಟಿಸಲು ಗೃಹ ಸಚಿವರು ಸೂಚಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎಂಟು ಈಶಾನ್ಯ ರಾಜ್ಯಗಳಲ್ಲಿ 22,000 ಹಿಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಲ್ಲದೆ, ಈಶಾನ್ಯದ 9 ಬುಡಕಟ್ಟು ಸಮುದಾಯಗಳು ತಮ್ಮ ಉಪಭಾಷೆಗಳ ಲಿಪಿಗಳನ್ನು ದೇವನಾಗರಿಗೆ ಪರಿವರ್ತಿಸಿದ್ದಾರೆ. ಈಶಾನ್ಯದ ಎಲ್ಲಾ ಎಂಟು ರಾಜ್ಯಗಳು ಶಾಲೆಗಳಲ್ಲಿ 10 ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯಗೊಳಿಸಲು ಒಪ್ಪಿಕೊಂಡಿವೆ ಎಂದು ತಿಳಿಸಲಾಗಿದೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾದ ಅಜಯ್ ಕುಮಾರ್ ಮಿಶ್ರಾ ಮತ್ತು ನಿಸಿತ್ ಪ್ರಮಾಣಿಕ್, ಅಧಿಕೃತ ಭಾಷಾ ಸಂಸದೀಯ ಸಮಿತಿಯ ಉಪಾಧ್ಯಕ್ಷ ಭರ್ತೃಹರಿ ಮಹತಾಬ್ ಮತ್ತು ಸಮಿತಿಯ ಇತರ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.