

ಅಹಮದಾಬಾದ್: ಅತ್ಯಾಚಾರ ಪ್ರಕರಣದ ಅಪರಾಧಿ ಆಸಾರಾಂ ಬಾಪು ಅಹಮದಾಬಾದ್ನ ಮೊಟೇರಾದಲ್ಲಿ ಹೊಂದಿರುವ ಆಶ್ರಮಕ್ಕೆ ಸೇರಿದ 45,000 ಚದರ ಮೀಟರ್ ಭೂಮಿ ವಾಪಸ್ ಪಡೆಯಲು ಗುಜರಾತ್ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಅನುಮತಿ ನೀಡಿದೆ. ಭೂಮಿ ವಾಪಸ್ ಪಡೆಯಲು ಸರಕಾರ ನಡೆಸಿದ ಕ್ರಮಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ವಿಚಾರಣೆ ನಂತರ ಈ ಆದೇಶ ಹೊರಡಿಸಲಾಗಿದೆ.
ಹಲವು ದಶಕಗಳ ಹಿಂದೆ ಕೇವಲ ಸೀಮಿತ ಧಾರ್ಮಿಕ ಉದ್ದೇಶದ ಬಳಕೆಗಾಗಿ ಮಾತ್ರ ಆಶ್ರಮಕ್ಕೆ ಭೂಮಿ ಮಂಜೂರು ಮಾಡಲಾಗಿತ್ತು. ಈ ಭೂಮಿಯಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆ ನಡೆಸಬಾರದು, ಅನಧಿ ಕೃತವಾಗಿ ಕಟ್ಟಡ ನಿರ್ಮಿಸಬಾರದು ಎಂದು ಸೇರಿದಂತೆ ಕೆಲವು ಷರತ್ತುಗಳನ್ನೂ ವಿಧಿ ಸಲಾಗಿತ್ತು. ಆದರೆ ಷರತ್ತುಗಳನ್ನು ಕಾಲ ಕ್ರಮೇಣ ಉಲ್ಲಂಘಿ ಸಲಾಗಿದೆ ಸರಕಾರ ವಾದ ಮಂಡಿಸಿದೆ.
ಆಶ್ರಮದ ಆವರಣದಲ್ಲಿರುವ ಅಕ್ರಮ ನಿರ್ಮಾಣಗಳನ್ನು ಸಕ್ರಮಗೊಳಿಸುವ ಕಲ್ಲಂಗಡಿ ಅರ್ಜಿಗಳನ್ನು ಮುನ್ಸಿಪಲ್ ಕಾರ್ಪೊರೇಷನ್ ಈಗಾಗಲೇ ಪರಿಶೀಲಿಸಿದ್ದು, ಅವುಗಳನ್ನು ತಿರಸ್ಕರಿಸಿದೆ ಎಂಬ ಸಂಗತಿಯನ್ನೂ ಸರಕಾರ ವಶಪಡಿಸಿ ನ್ಯಾಯಾಲಯದ ಗಮನಕ್ಕೆ ತಂದಿತು.













