Home News Udupi: ಸ್ವಂತ ಬಸ್ ಮಾರಾಟ ಮಾಡಿ ಮತ್ತದೇ ಬಸ್ ಅನ್ನು ಕದ್ದು ತಂದ ಅಪ್ಪ, ಮಗ...

Udupi: ಸ್ವಂತ ಬಸ್ ಮಾರಾಟ ಮಾಡಿ ಮತ್ತದೇ ಬಸ್ ಅನ್ನು ಕದ್ದು ತಂದ ಅಪ್ಪ, ಮಗ – ಈಗ ಜೈಲು ಪಾಲು !!

Hindu neighbor gifts plot of land

Hindu neighbour gifts land to Muslim journalist

Udupi: ಸಮಾಜದಲ್ಲಿ ನಡೆಯುವಂತಹ ಕೆಲವೊಂದು ಘಟನೆಗಳು ತುಂಬಾ ಕಾಕತಾಳಿಯ ಎನಿಸುತ್ತದೆ. ಅಲ್ಲದೆ ಕೆಲವೊಮ್ಮೆ ವಿಚಿತ್ರವಾಗಿಯೂ ಕಾಣುತ್ತವೆ. ಒಮ್ಮೊಮ್ಮೆ ಇವು ನಗು ತರಿಸಿದರೆ ಮತ್ತೆ ವಿಪರೀತ ಕೋಪವನ್ನು ಕೂಡ ತರಿಸುತ್ತದೆ. ಇದೀಗ ಅಂತದ್ದೇ ಪ್ರಕರಣ ಒಂದು ಉಡುಪಿಯಲ್ಲಿ ನಡೆದಿದೆ.

ಹೌದು, ಉಡುಪಿ(Udupi)ಯಲ್ಲಿ ನಡೆದ ಈ ಒಂದು ಘಟನೆ ನಿಮಗೂ ನಿಜಕ್ಕೂ ವಿಚಿತ್ರವೆನಿಸುತ್ತದೆ. ಅಂದೇನೆಂದರೆ ಅಪ್ಪ ಮಗ ಇಬ್ಬರು ಸೇರಿ ತುಮಕೂರಿನ ಉದ್ಯಮಿ ಕೊರಟಗೆರಿಯ ಸೈಯದ್ ಎಂಬುವವರಿಗೆ ತಮ್ಮ ಸ್ವಂತ ಬಸ್ ಅನ್ನು ತಾವೇ ಮಾರಾಟ ಮಾಡಿದ್ದಾರೆ. ಬಳಿಕ ಅದೇ ಅಪ್ಪ ಮಗ ಇಬ್ಬರು ಸೇರಿ ಅದೇ ಬಸ್ ಅನ್ನು ಕದ್ದಿರುವಂತಹ ಘಟನೆ ನಡೆದಿದೆ. ಈ ಕುರಿತು ಉಡುಪಿ ಜಿಲ್ಲೆಯ ಕಾಪುವಿನಲ್ಲಿ ತಂದೆ ಮಗನ ವಿರುದ್ಧ ಇದೀಗ ‘FIR’ ದಾಖಲಾಗಿದೆ.

ಅಷ್ಟಕ್ಕೂ ಆಗಿದ್ದೇನು?
ತುಮಕೂರಿನ ಕೊರಟಗೆರಿಯ ಸೈಯದ್ ಎನ್ನುವವರು ಬಸ್ ಕಾಪುವಿನ ಸಮೀರ್ ಮಾಲೀಕತ್ವದ 2017ರ ಮಾಡೆಲ್ ನ ಬಸ್ ಅನ್ನು ಖರೀಸಿದಿದ್ದರು. ಸೈಯದ್ ಮಗ ಸಿದ್ದಿಕ್ ಹಾಗೂ ಸ್ನೇಹಿತ ಜಾವೇದ ಜೊತೆ ಬಸ್ ಖರೀದಿಗೆ ಹೋಗಿದ್ದರು. 9,50,000 ನೀಡಿ ಬಸ್ ಖರೀದಿಸಿ ತುಮಕೂರಿಗೆ ತಂದಿದ್ದರು. ಬಸ್ ಮಾರಾಟವಾದ ಬಳಿಕ ಅಪ್ಪ ಮಗನೇ, ಮಾರಾಟ ಮಾಡಿದ ಬಸ್ಸನ್ನು ಮತ್ತೆ ಕದ್ದು ತಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಸಮೀರ್ ಹಾಗೂ ಮಗ ಅಬ್ದುಲ್ ಖಾದರ್ ವಿರುದ್ಧ ‘FIR’ ದಾಖಲಾಗಿದೆ. ಸದ್ಯ ತಂದೆ ಮಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.