Home News ಮುಸ್ಲಿಮರು ” ಭಾರತ್ ಮಾತಾ ಕಿ ಜೈ ” ಮತ್ತು ” ವಂದೇ ಮಾತರಂ ”...

ಮುಸ್ಲಿಮರು ” ಭಾರತ್ ಮಾತಾ ಕಿ ಜೈ ” ಮತ್ತು ” ವಂದೇ ಮಾತರಂ ” ಅಂದ ದಿನ ಭಾರತ ಮುಸ್ಲಿಂ ಪ್ರಧಾನಿಗಾಗಿ ಸಿದ್ಧ – ವಿವೇಕ್ ಅಗ್ನಿಹೋತ್ರಿ !

Hindu neighbor gifts plot of land

Hindu neighbour gifts land to Muslim journalist

ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನ ಮಂತ್ರಿಯಾದ ರಿಷಿ ಸುನಕ್ ಬಗ್ಗೆ ವಿವಾದಾತ್ಮಕ ಚಿತ್ರನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಚರ್ಚೆಗೆ ಇಳಿದಿದ್ದಾರೆ. ಮತ್ತು ಭಾರತದಲ್ಲಿನ ಎಲ್ಲಾ ಮುಸ್ಲಿಮರು ಯಾವಾಗ ” ಭಾರತ್ ಮಾತಾ ಕಿ ಜೈ ” ಮತ್ತು ” ವಂದೇ ಮಾತರಂ ” ಎಂದು ಹೇಳುವ ದಿನ ಭಾರತವು ಮುಸ್ಲಿಂ ಪ್ರಧಾನಿಗಾಗಿ ಸಿದ್ಧವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ಪತ್ರಕರ್ತರೊಬ್ಬರ ಟ್ವೀಟ್‌ಗೆ ಪ್ರತ್ಯುತ್ತರವಾಗಿ ಮುಟ್ಟಿ ನೋಡಿಕೊಳ್ಳುವ ಪ್ರತಿ ಟ್ವೀಟ್ ಮಾಡಿದ್ದಾರೆ.

“ಭಾರತದ ಎಲ್ಲಾ ಮುಸ್ಲಿಮರು ‘ಕಾಫಿರ್’ ಪದವನ್ನು ನಿಷೇಧಿಸುವ ದಿನ, ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಬೇಷರತ್ತಾಗಿ ಮಾತನಾಡುತ್ತಾರೆಯೋ ; ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಯಾವಾಗ ಭಾವಿಸುತ್ತಾರೋ, ಮೊದಲು ಭಾರತೀಯ ಎಂದು ಯಾವತ್ತೂ ಗುರುತಿಸಿಕೊಂಡು ನಂತರ ಬೇರೆ ಯಾವುದಕ್ಕಾದರೂ ಪ್ರಾಮುಖ್ಯತೆ ನೀಡುತ್ತಾರೋ, ಮತ್ತು ಹುರುಪಿನಿಂದ ಮತ್ತು ಬದ್ಧತೆಯಿಂದ ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿ ಮತ್ತು ‘ ವಂದೇ ಮಾತರಂ ‘ ಹೇಳುತ್ತಾರೋ, ಅಂದು ಭಾರತವು ಮುಸ್ಲಿಂ ಪ್ರಧಾನಿಗಾಗಿ ಸಿದ್ಧವಾಗಲಿದೆ. ಅದಕ್ಕೆನೀವು ರೆಡಿಯಾ ?- ಕಾಶ್ಮೀರ ಫೈಲ್ಸ್ ನಿರ್ದೇಶಕರು ಟ್ವೀಟ್ ಮುಖ್ಯ ವಿಷವನ್ನು ದೊಡ್ಡದಾಗಿ ಪ್ರಶ್ನಿಸಿದೆ.

ಮೊನ್ನೆ ಶಶಿ ತರೂರ್, ಪಿ ಚಿದಂಬರಂ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ವ್ಯಕ್ತಿಯೊಬ್ಬರು ಭಾರತದಲ್ಲಿ ಪ್ರಧಾನಿಯಾಗಬಹುದೇ ಎಂದು ಪ್ರಶ್ನಿಸಿದ ನಂತರ ಬಿಜೆಪಿ ಮತ್ತು ಪ್ರತಿಪಕ್ಷಗಳ ಮಾತಿನ ಯುದ್ಧ ಪ್ರಾರಂಭವಾಯಿತು. ಮನಮೋಹನ್ ಸಿಂಗ್ ಅವರ ಉದಾಹರಣೆಯನ್ನು ಉಲ್ಲೇಖಿಸಿದ ಬಿಜೆಪಿ, ಭಾರತವು ಒಬ್ಬ ಸಿಖ್ ಪ್ರಧಾನಿ, ಒಬ್ಬ ಸಿಖ್ ಮತ್ತು ಮೂರು ಮುಸ್ಲಿಂ ಅಧ್ಯಕ್ಷರನ್ನು ನೀಡಿದೆ ಎಂದು ಹೇಳಿದೆ. ಭಾರತೀಯ ವಂಶಾವಳಿಯೊಂದಿಗೆ ಯುಕೆಯಲ್ಲಿ ಜನಿಸಿದ ರಿಷಿ ಸುನಕ್ ಮತ್ತು ‘ರಾಜೀವ್ ಅವರೊಂದಿಗೆ ಮದುವೆಯಾದ ನಂತರ ಹಲವಾರು ದಶಕಗಳ ಕಾಲ ಭಾರತೀಯ ಪೌರತ್ವವನ್ನು ಪಡೆಯಲು ‘ ನಿರಾಕರಿಸಿದ್ದ ‘ ಸೋನಿಯಾ ಗಾಂಧಿ ನಡುವೆ ಯಾವುದೇ ಹೋಲಿಕೆ ಸಾಧ್ಯವಿಲ್ಲ ಎಂದು ಬಿಜೆಪಿ ಕಟುವಾಗಿ ಹೇಳಿದೆ.

ಸುನಕ್ ಅಧಿಕಾರಕ್ಕೆ ಬಂದ ಮೇಲೆ, ಮಾಜಿ ಜೆ & ಕೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಯುಕೆ ಜನಾಂಗೀಯ ಅಲ್ಪಸಂಖ್ಯಾತ ಸದಸ್ಯರನ್ನು ತನ್ನ ಪ್ರಧಾನ ಮಂತ್ರಿಯಾಗಿ ಸ್ವೀಕರಿಸಿದರೆ, ಭಾರತವು ಇನ್ನೂ ಎನ್‌ಆರ್‌ಸಿ ಮತ್ತು ಸಿಎಎಯಿಂದ ಸಂಕೋಲೆಯಲ್ಲಿದೆ. ಇದಕ್ಕೆ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಅವರು, ಜೆ&ಕೆ ಯಲ್ಲಿ ಅಲ್ಪಸಂಖ್ಯಾತ ಮುಖ್ಯಮಂತ್ರಿಯನ್ನು ಮೊದಲು ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದರು. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ರಿಷಿ ಸುನಕ್ ಯುಕೆ ಪ್ರಧಾನಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ತಮ್ಮ ಜೀವಿತಾವಧಿಯಲ್ಲಿ ಹಿಜಾಬ್ ಧರಿಸಿದ ಭಾರತೀಯ ಪ್ರಧಾನಿಯನ್ನು ನೋಡುವ ಬಯಕೆಯನ್ನು ಪುನರುಚ್ಚರಿಸಿದ್ದರು.