

ಚಿಕ್ಕಮಗಳೂರು: ಮದುವೆ ಮಂಟಪಕ್ಕೆ ಬಂದ ವಧು ಕೊನೆಗೆ ಮದುವೆಯನ್ನು ರದ್ದು ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಎರಡೂ ಕುಟುಂಬಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ವರನ ಕುಟುಂಬದವರು ವಧುವಿನ ಮೇಲೆ ತೀರಾ ಅಸಾಮಾಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಶೃಂಗೇರಿಯ ಈಡಿಗರ ಸಮುದಾಯ ಭವನದಲ್ಲಿ ದೀಕ್ಷಿತ್ ಮತ್ತು ಬಾಳೆಹೊನ್ನೂರು ಮೂಲದ ಯುವತಿ ವಿವಾಹ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿದ್ದವು. ಅತಿಥಿಗಳು ಬಂದಿದ್ದರು. ಮದುವೆ ವಿಧಿ ವಿಧಾನಗಳು ಆರಂಭವಾಗುವ ಸಮಯಕ್ಕೆ ವಧು ವರನ ವಿರುದ್ಧ ಪ್ರಕರಣ ಇರುವುದು ಹಾಗೂ ಆತನ ವೈಯಕ್ತಿಕ ವಿಚಾರಗಳ ಕುರಿತು ಅನುಮಾನ ವ್ಯಕ್ತ ಪಡಿಸಿ ಮದುವೆಗೆ ನಿರಾಕರಣೆ ಮಾಡಿರುವುದಾಗಿ ಹೇಳಲಾಗಿದೆ.
ಇದರಿಂದ ಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ವಧುವಿನ ಕಡೆಯವರು ಆಕೆಯ ಮನವೊಲಿಸಲು ಯತ್ನ ಮಾಡಿದರೂ ಆಕೆ ತನ್ನ ನಿರ್ಧಾರದಲ್ಲಿ ಅಚಲವಾಗಿದ್ದಳು ಎಂದು ತಿಳಿದು ಬಂದಿದೆ.