Home News ಬೆಳ್ತಂಗಡಿ | ಕಾಶಿಬೆಟ್ಟು ಸಮೀಪ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

ಬೆಳ್ತಂಗಡಿ | ಕಾಶಿಬೆಟ್ಟು ಸಮೀಪ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

Hindu neighbor gifts plot of land

Hindu neighbour gifts land to Muslim journalist

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕಾಶಿಬೆಟ್ಟು ಸಮೀಪ ಇಂದು ಬೆಳಗ್ಗೆ ನಡೆದಿದೆ.

ಮಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು, ರಸ್ತೆ ಬದಿಗೆ ಚಲಿಸಿ ಪಲ್ಟಿಯಾಗಿದೆ. ರಸ್ತೆ ಬದಿಯ ಹುಲ್ಲು ಸ್ವಚ್ಛಗೊಳಿಸಿ ಮಣ್ಣು ಹಾಕಲಾಗಿದ್ದು, ಮಳೆ ಬರುತ್ತಿರುವುದರಿಂದ ಮಣ್ಣಿನಲ್ಲಿ ಕಾರು ಜಾರಿಕೊಂಡು ಹೋಗಿ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗಿದೆ.

ಅಪಘಾತ ಸಂಭವಿಸಿದ ತಕ್ಷಣ ಕಾರಿನ ಹಿಂದೆ ಇದ್ದ ಸಂತೆಕಟ್ಟೆ ರಿಕ್ಷಾ ಚಾಲಕರೊಬ್ಬರು ಚಾಲಕನನ್ನು ತನ್ನ ರಿಕ್ಷಾದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.