Home News ಬೆಳ್ತಂಗಡಿ | ಲಾಯಿಲದ ಬಾಲಕ ನಾಪತ್ತೆ, ದೂರು ದಾಖಲು

ಬೆಳ್ತಂಗಡಿ | ಲಾಯಿಲದ ಬಾಲಕ ನಾಪತ್ತೆ, ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

ಮನೆಯಿಂದ ಹೊರಹೋದ ಬಾಲಕನೋರ್ವ ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಅ.27ರಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ನಡೆದಿದೆ.

ಲಾಯಿಲ ಗ್ರಾಮದ ಪಡ್ಡಾಡಿ ಮನೆ ನಿವಾಸಿ ಬಾಬು ಎಂಬವರ ಪುತ್ರ ಬಿಪಿನ (17ವ) ನಾಪತ್ತೆಯಾದ ಬಾಲಕನಾಗಿದ್ದಾನೆ.

ಪ್ರಥಮ ಪಿಯುಸಿ ಮುಗಿಸಿ ತಂದೆಯೊಂದಿಗೆ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಈತ, ಅ. 19 ರಂದು ಬೆಳಿಗ್ಗೆ ಸ್ವ-ಸಹಾಯ ಸಂಘಕ್ಕೆ ಹಣ ಕಟ್ಟಲು ಹೋದವನು ಸಂಜೆಯಾದರೂ ಮನೆಗೆ ವಾಪಾಸ್ಸು ಬಂದಿರಲಿಲ್ಲವೆನ್ನಲಾಗಿದೆ. ಬಳಿಕ ಅ. 21 ರಂದು ಆತನ ತಾಯಿಗೆ ಮೊಬೈಲ್ ಕರೆ ಮಾಡಿ ಮನೆಗೆ ವಾಪಾಸ್ಸು ಬರುವುದಾಗಿ ಹೇಳಿದ್ದನೆನ್ನಲಾಗಿದೆ.

ಅ.25 ರಂದು ಆತ ಪುನಃ ತಾಯಿಗೆ ಫೋನ್ ಕರೆ ಮಾಡಿ ಈ ದಿನ ಸಂಜೆ ಮನೆಗೆ ವಾಪಾಸ್ ಬರುವುದಾಗಿ ತಿಳಿಸಿ ನಾಪತ್ತೆಯಾಗಿದ್ದ. ನಂತರ ಆತನ ಮೊಬೈಲ್ ಫೋನ್‌ಗೆ ಎಷ್ಟೇ ಕರೆ ಮಾಡಿದರೂ ಆತ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಆತನ ತಂದೆ ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.