Home » ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶ ಆಮಂತ್ರಣ ಪತ್ರಿಕೆ ಬಿಡುಗಡೆ

ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶ ಆಮಂತ್ರಣ ಪತ್ರಿಕೆ ಬಿಡುಗಡೆ

0 comments

ಮಚ್ಚಿನ : ಇತಿಹಾಸ ಪ್ರಸಿದ್ದ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಜಿರ್ನೋದ್ಧಾರ ಕೆಲಸ ಭರದಿಂದ ಸಾಗುತ್ತಿದೆ. ನೂತನ ಬ್ರಹ್ಮ ರಥ ಕೆಲಸ, ನೂತನ ಕೊಡಿ ಮರ, ಶಿಲಾಮಯ ಈಶ್ವರ ದೇವರ ಗರ್ಭಗ್ರಹ ಹಾಗು ತೀರ್ಥ ಮಂಟಪದ ನಿರ್ಮಾಣದ ನಿಧಿ ಕುಂಭ ಸ್ಥಾಪನೆ ಪೂರ್ವಕ ಷಡಾಧಾರ ಪ್ರತಿಷ್ಠೆ ಹಾಗು ಅಷ್ಟೇಷ್ಟಕ ಸ್ಥಾಪನೆ ಪೂರ್ವಕ ಗರ್ಭನ್ಯಾಸವು ಕೆಲಸಗಳು ನಡೆಯುತ್ತಿದೆ.

ಮಾ. 30ರಿಂದ ಏ. 6ರ ವರೆಗೆ ನಡೆಯುವ ಬ್ರಹ್ಮ ಕಲಶದ ಆಮಂತ್ರಣ ಪತ್ರಿಕೆಯನ್ನು ದೇರೆಬೈಲು ಬ್ರಹ್ಮಶ್ರೀ ಡಾ. ಶಿವಪ್ರಸಾದ್ ತಂತ್ರಿಯವರು ಮಾ. 2ರಂದು ದೇವಸ್ಥಾನದಲ್ಲಿ ಬಿಡುಗಡೆ ಮಾಡಿದರು.

ಅನುವಂಶಿಯ ಆಡಳಿತ ಮೊಕೇಸರರಾದ ಡಾ. ಎಂ ಹರ್ಷ ಸಂಪಿಗೆತ್ತಾಯ, ವಕೀಲರಾದ ವಸಂತ ಮರಕಡ, ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಕಾಂತ ನಿಡ್ತಾಜೆ, ಹೊನ್ನಪ್ಪ ಕುಲಾಲ್,ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಸದಾನಂದ ಪೂಜಾರಿ, ದೇವಸ್ಥಾನದ ವ್ಯವಸ್ಥಾಪಕ ಬಾಲಕೃಷ್ಣ, ಬಿ. ಸುನಿಲ್ ಮುಚ್ಚಿನ್ನಯ ಮೊದಲಾದವರು ಉಪಸ್ಥಿತರಿದ್ದರು. ದೇವಸ್ಥಾನದ ಬ್ರಹ್ಮಕಲಶ ಏ.5ರಂದು ನಡೆಯಲಿದೆ.

You may also like