Home » Kundapura: ಯಕ್ಷಗಾನದ ನಡುವೆ ಶಿಳ್ಳೆ ಹೊಡೆದವರನ್ನು ತರಾಟೆಗೆ ತೆಗೆದುಕೊಂಡ ಕಲಾವಿದ ಉಜಿರೆ ಅಶೋಕ್ ಭಟ್!! ಶುರುವಾದ ಪರ -ವಿರೋಧ ಚರ್ಚೆ!!

Kundapura: ಯಕ್ಷಗಾನದ ನಡುವೆ ಶಿಳ್ಳೆ ಹೊಡೆದವರನ್ನು ತರಾಟೆಗೆ ತೆಗೆದುಕೊಂಡ ಕಲಾವಿದ ಉಜಿರೆ ಅಶೋಕ್ ಭಟ್!! ಶುರುವಾದ ಪರ -ವಿರೋಧ ಚರ್ಚೆ!!

0 comments

Kundapura: ಇಂದು ಯಾವುದೇ ವೇದಿಕೆ ಕಾರ್ಯಕ್ರಮ ನಡೆದರೂ ಅಲ್ಲಿ ಅನೇಕರು ವಿಷಲ್ ಹೊಡೆದ ಸಂಭ್ರಮಿಸುತ್ತಾರೆ. ಮಾರ್ಡನ್ ಕಾರ್ಯಕ್ರಮಗಳಿಗೆ ಈ ಒಂದು ಕಲ್ಚರ್ ಹೊಂದುತ್ತದೆ ಎಂದು ಹೇಳಬಹುದು. ಆದರೆ ಯಕ್ಷಗಾನ ದಂತಹ ಸಾಂಪ್ರದಾಯಿಕ ಕಲಾ ಕಾರ್ಯಕ್ರಮಗಳಲ್ಲೂ ಈ ರೀತಿ ವಿಷಲ್ ಹೊಡೆಯುವುದು ಎಷ್ಟು ಸರಿ? ಇದೀಗ ಯಕ್ಷಗಾನದ ವೇಳೆ ಶಿಳ್ಳೆ ಹೊಡೆದವರಿಗೆ ಕೃಷ್ಣ ಪಾತ್ರಧಾರಿಯಾಗಿದ್ದ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಕೋಪಗೊಂಡು ರಂಗಸ್ಥಳದಿಂದಲೇ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದ್ದು ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಕುಂದಾಪುರದ ಹೆನ್ನಾಬೈಲಿನಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇನ್ನೇನು ಭಾಗವತರ ಪದ್ಯ ಮುಗಿದು ಅರ್ಥ ಹೇಳಲು ವೇಷಧಾರಿ ಸಿದ್ಧನಾದಾಗ ಪ್ರೆಕ್ಷಕರು ಶಿಳ್ಳೆ ಊದಿದ್ದಾರೆ. ಆಗ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಸಿಟ್ಟಿಗೆದ್ದು ಬುದ್ದಿಮಾತು ಹೇಳಿದ್ದಾರೆ.

ಕೃಷ್ಣ ಪಾತ್ರಧಾರಿಯಾಗಿ ವೇದಿಕೆಯಲ್ಲಿ ಹೆಜ್ಜೆ ಹಾಕುತ್ತಿದ್ದ ವೇಳೆ ಪ್ರೇಕ್ಷಕರ ಕಡೆಯಿಂದ ಶಿಳ್ಳೆ ಬಂದಾಗ ಕೋಪಗೊಂಡ ಅಶೋಕ್ ಭಟ್ ಅವರು ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ, ದೊಂಬರಾಟ ಅಲ್ಲ ಇದು. ನನಗೆ ದಾಕ್ಷಿಣ್ಯ ಇಲ್ಲ, ಇದು ಯಕ್ಷಗಾನವೊ? ಕೋಳಿ ಕಟ್ಟವೋ? ಕಂಬಳವೋ? ಆಗದಿದ್ದರೆ ಬನ್ಸ್ ತಿಂದು ಹೋಗಿ. ಶಿಳ್ಳೆ ಹೊಡೆಯಲು ಯಾರಾದರೂ ದುಡ್ಡು ಕೊಟ್ಟಿದ್ದಾರೋ? ಭಾಗವತರ ಕಂಠ ಹಾಳು ಮಾಡುತ್ತೀರಾ? ಸಭ್ಯ ಸಭೆ ಅರ್ಥ ಮಾಡಿಕೊಳ್ಳಬೇಕು. ಹುಚ್ಚರನ್ನು ಬೆಳೆಸಬೇಡಿ. ಕಲಾ ಪ್ರೇಕ್ಷಕರನ್ನು ಬೆಳೆಸಿ. ನಾವು ಕೆಲಸ ಇಲ್ಲದ್ದಕ್ಕೆ ಇಲ್ಲಿ ಬಂದು ಬೆವರು ಹರಿಸಿ ಕುಣಿಯುವುದಲ್ಲ. ಅವರಿಗೆ ವಿಸಿಲ್, ದುಡ್ಡು ಕೊಟ್ಟವರು ಯಾರು? ಧಾರ್ಮಿಕ ಭಾಷಣ ಮಾಡಬೇಕೋ ಒಂದು ಗಂಟೆ ಅಥವಾ ಯಕ್ಷಗಾನ ಮಾಡಬೇಕೋ? ಏನು ಹೇಳುತ್ತೀರಿ ಹಿರಿಯರೇ? ಆಲೋಚನೆ ಮಾಡಿ ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ. ಸದ್ಯ ಅಶೋಕ್ ಭಟ್ ವರ್ತನೆಗೆ ಪರ ವಿರೋಧ ಚರ್ಚೆಗಳು ಶುರುವಾಗಿವೆ. 

You may also like