ಕಲ್ಲಡ್ಕ ಮಾ.21: ಕಲ್ಲಡ್ಕದ ಯುವಕನೋರ್ವ ಗೂನಡ್ಕದ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ.

ಬಂಟ್ವಾಳ ತಾಲೂಕಿನ ಕಲ್ಲಡ್ಕ ಮೂಲದ ತಿಲಕರಾಜ್ ಎನ್ನುವವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ನಿನ್ನೆ ಸಂಜೆ ಕಲ್ಲಡ್ಕದಿಂದ ಮಡಿಕೇರಿಗೆಂದು ತನ್ನ ಕಾರಿನಲ್ಲಿ ಹೊರಟಿದ್ದ ತಿಲಕರಾಜ್ ಸಂಜೆ ಸಮಯದಲ್ಲಿ ಗೂನಡ್ಕದಲ್ಲಿ ರೂಂ ಮಾಡಿದ್ದು, ಇಂದು ಅದರ ಬಾಗಿಲು ಓಪನ್ ಆಗದಿರುವುದನ್ನು ಕಂಡು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಬಂದಿತ್ತೆನ್ನಲಾಗಿದೆ.
ಪೊಲೀಸರು ಬಂದ ನಂತರ ಸಮಾಜ ಸೇವಕ ತಾಜ್ ಟರ್ಲಿಯವರು ಮಾಡಿನ ಮೂಲಕ ಒಳ ಪ್ರವೇಶ ಮಾಡಿ ಮೃತದೇಹ ಹೊರತೆಗೆಯುವಲ್ಲಿ ಸಹಕರಿಸಿರುವ ಕುರಿತು ವರದಿಯಾಗಿದೆ.

