Home News Wayanad Landslide: ವಯನಾಡು ದುರಂತ : ಮಣ್ಣಿನ ರಾಶಿಯಲ್ಲಿ ಸಿಲುಕಿದ ವ್ಯಕ್ತಿಯಿಂದ ಕಾಪಾಡಿ ಎಂಬ ಆರ್ಥನಾದ...

Wayanad Landslide: ವಯನಾಡು ದುರಂತ : ಮಣ್ಣಿನ ರಾಶಿಯಲ್ಲಿ ಸಿಲುಕಿದ ವ್ಯಕ್ತಿಯಿಂದ ಕಾಪಾಡಿ ಎಂಬ ಆರ್ಥನಾದ : ಮನಕಲಕುವ ವಿಡಿಯೋ ವೈರಲ್

Wayanad Landslide

Hindu neighbor gifts plot of land

Hindu neighbour gifts land to Muslim journalist

Wayanad Landslide: ಬದುಕು ಮೂರಾಬಟ್ಟೆಯಾಗಿದೆ. ಎತ್ತ ನೋಡಿದರೂ ಬರೇ ಮಣ್ಣಿನ ರಾಶಿ. ಕೆಸರು ತುಂಬಿದ ಮಣ್ಣಿನ ಜಲ ರಾಶಿಯ ಮಧ್ಯೆ ಅದೆಷ್ಟೋ ಜೀವಗಳು ಹುಡದುಗಿ ಹೋಗಿವೆ. ನಿನ್ನೆ ರಾತ್ರಿಯಿಂದ ಬೆಳಕಾಗುವುದರೊಳಗೆ ಬದುಕೇ ಮಣ್ಣಿನೊಳಗೆ ಹೂತು ಹೋಗಿದೆ. 60 ಜನಕ್ಕೂ ಅಧಿಕ ಮಂದಿ ಸಾವನ್ನಪ್ಪಿದರೆ, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ತನ್ನವರಿಗಾಗಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಮಧ್ಯೆ ಕಣ್ಣಂಚಿಗೂ ಕಾಣದ ಮಣ್ಣಿನ ರಾಶಿಯ ಮಧ್ಯದಿಂದ ವ್ಯಕ್ತಿಯೊಬ್ಬರು ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೇರಳದ ವಯನಾಡು ಜಿಲ್ಲೆಯಲ್ಲಿ ನಡೆದ ಭೂಕುಸಿತದಿಂದ ಹಲವಾರು ಗ್ರಾಮಗಳು ಸಂಕಟಕ್ಕೀಡಾಗಿವೆ. ಮನೆಗಳು ಧ್ವಂಸವಾಗಿದ್ದು, ಹಲವರು ಅವಶೇಷಗಳ ಅಡಿ ಸಿಲುಕಿದ್ದಾರೆ. ರಕ್ಷಣೆಗೆ ಮನವಿ ಮಾಡುವ ನಿವಾಸಿಗಳ ಫೋನ್ ಕರೆಗಳು ತುರ್ತು ಲೈನ್‌ಗಳನ್ನು ಬಿರುಗಾಳಿಯಂತೆ ತಟ್ಟಲಾರಂಭಿಸಿದವು. ಮಾಧ್ಯಮಗಳಲ್ಲಿ ಅಲ್ಲಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳು ಸಹಾಯಕ್ಕಾಗಿ ಅಳುತ್ತಿರುವ ಹೃದಯ ವಿದ್ರಾವಕ ಸಂಭಾಷಣೆಗಳನ್ನು ಪ್ರಸಾರ ಮಾಡಿವೆ. ಚೂರಲ್ಮಾಲಾ ಪಟ್ಟಣದ ಮಹಿಳೆಯೊಬ್ಬರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಕುಟುಂಬದ ಸದಸ್ಯರನ್ನು ವಿವರಿಸುವಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಂತವರನ್ನು ಎದೆಗುಂದುವಂತೆ ಮಾಡುತ್ತಿತ್ತು.

ಯಾರಾದರೂ, ದಯವಿಟ್ಟು ಬಂದು ನಮಗೆ ಸಹಾಯ ಮಾಡಿ. ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ನಮ್ಮ ಕುಟುಂಬದ ಸದಸ್ಯ ಜೀವಂತವಾಗಿದ್ದಾರೆಯೇ ಎಂದು ನಮಗೆ ತಿಳಿದಿಲ್ಲ. ನಮ್ಮ ಮನೆ ಪಟ್ಟಣದಲ್ಲಿಯೇ ಇದೆ ಎಂದು ಮಹಿಳೆ ಹೇಳುತ್ತಿರುವುದು ಕೇಳಿಸುತ್ತದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿರುವ ಇನ್ನೊಬ್ಬ ನಿವಾಸಿ, ಈ ಪ್ರದೇಶದಲ್ಲಿ ನಡೆಯುತ್ತಿರುವ ನಡುಕದ ಬಗ್ಗೆ ಮಾತನಾಡಿದರು. ಭೂಮಿ ನಡುಗುತ್ತಿದೆ. ಸ್ಥಳದಲ್ಲಿ ಭಾರಿ ಶಬ್ದವಿದೆ. ಚೂರಮಾಲಾದಿಂದ ಬರಲು ನಮಗೆ ಯಾವುದೇ ಮಾರ್ಗವಿಲ್ಲ ಎಂದು ಅವರು ಹೇಳಿದರು. ಹೀಗೆ ಒಬ್ಬರಾದಂತೆ ಒಬ್ಬರು ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ.

ಮುಂಡನಲ್ಲಿ ಗಮನಾರ್ಹ ಸಂಖ್ಯೆಯ ವ್ಯಕ್ತಿಗಳು ಮಣ್ಣಿನ ಅಡಿಯಲ್ಲಿ ಸಿಲುಕಿ ತಮ್ಮ ಪ್ರಾಣಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಕರೆ ಮಾಡಿದ ಇನ್ನೊಬ್ಬರು ತುರ್ತಾಗಿ ವರದಿ ಮಾಡಿದ್ದಾರೆ. ಮೆಪ್ಪಾಡಿ ಪ್ರದೇಶದಿಂದ ಯಾರಾದರೂ ವಾಹನದ ಮೂಲಕ ಇಲ್ಲಿಗೆ ಬರಲು ಸಾಧ್ಯವಾದರೆ, ನಾವು ನೂರಾರು ಜನರ ಜೀವವನ್ನು ಉಳಿಸಬಹುದು ಎಂದು ಅವರು ಹೇಳಿದರು.

Kerala: ವಯನಾಡ್‌ ಭೂಕುಸಿತಕ್ಕೆ ನಿಜವಾದ ಕಾರಣವೇನು?