ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ 33ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳಕ್ಕೆ ಅಳದಂಗಡಿ ಅರಮನೆ ತಿಮ್ಮಣ್ಣ ಅರಸರಾದ ಪದ್ಮ ಪ್ರಸಾದ್ ಅಜಿಲರು ಉದ್ಘಾಟನೆ ನೆರವೇರಿಸಿದರು.

ಶಿವಾನಂದ ಭಟ್ ಪೂಜಾ ವಿಧಿವಿಧಾನ ನಡೆಸಿ ಯಾವುದೇ ವಿಘ್ನ ನಡೆಯದೆ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ಕಂಬಳ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ನಿವೃತ್ತ ಎಸ್.ಪಿ. ಪಿತಾಂಬರ ಹೆರಾಜೆ, ಸಹಕಾರಿ ರತ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಟ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ ಕುಮಾರ್ ಗೌಡ, ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೊ, ಅಪಾರ ಸರಕಾರಿ ವಕೀಲ ಮನೋಹರ್ ಕುಮಾರ್ ಇಳಂತಿಲ, ನಡ್ವಾಲ್ ಸಿರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್, ಪ್ರಭಾಕರ ಹಟ್ಟಜೆ, ಸತೀಶ್ ಹೆಗ್ಡೆ, ಗ್ಯಾರಂಟಿ ಸಮಿತಿ ಸದಸ್ಯರು ವಂದನಾ ಭಂಡಾರಿ, ವೇಣೂರು ವ್ಯವಸ್ತಾಪನ ಸಮಿತಿ ಸದಸ್ಯರು, ವಿಮಲಾ ಚಂದ್ರಶೇಖರ, ಪ್ರಕಾಶ್ ಕೋಟ್ಯಾನ್, ಮೀನಾಕ್ಷಿ, ಮನೋಜ್ ಕೋಟ್ಯಾನ್, ಪದ್ಮನಾಭ ಸಾಲಿಯಾನ್, ಕೇಶವ, ಗುಣವತಿ, ತೇಜಸ್ವಿ, ವಿನೋದ, ರಾಜಕೀರ್ತಿ ಜೈನ್, ಹರೀಶ್ ಕುಮಾರ್, ನ್ಯಾಯವಾದಿ ಅಜಿತ್ ಎನ್. ಸಂಚಾಲಕ ಪ್ರವೀಣ್ ಫೆರ್ನಾಂಡಿಸ್, ಉಪಾಧ್ಯಕ್ಷ ಗೋಪಾಲ ಪೂಜಾರಿ, ಕರುಣಾಕರ ಸಾಲ್ಯಾನ್, ಸ್ಟಿವನ್ ಮೋನಿಸ್, ಕಾರ್ಯದರ್ಶಿ ಭರತ್ ರಾಜ್ ಕೋಶಾಧಿಕಾರಿ ಅಶೋಕ್ ಪಾಣೂರು ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಭಾರಿಯಂತೆ ದೋಣಿ ವಿಹಾರ, ಇಬ್ಬರು ದೋಣಿಯಲ್ಲಿ ಕಾಯರ್ಕಿಂಗ್, ಬ್ಲಾಯಿಡಿಂಗ್ ವ್ಯವಸ್ಥೆ, ಸಂಚಾಲಕ ಪ್ರವೀಣ್ ಫೆರ್ನಾಂಡಿಸ್ ನೇತೃತ್ವದಲ್ಲಿ ಹಳೇ ಸಾಮಗ್ರಿಗಳ ಪ್ರದರ್ಶನ ಮತ್ತು ಆಹಾರ ಮೇಳ ವ್ಯವಸ್ಥೆ ಮಾಡಲಾಗಿದೆ.
ಎಲ್ಲರಿಗೂ ಕುಳಿತುಕೊಂಡು ನೋಡಲು ಗ್ಯಾಲರಿ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಕಂಬಳದ ಕರೆಗೆ ಅಳದಂಗಡಿ ಅರಮನೆಯ ಅರಸ ಪದ್ಮಪ್ರಸಾದ್ ಅಜಿಲರ ಕೋಣಗಳನ್ನು ಕರೆಗೆ ಪ್ರಪ್ರಥಮವಾಗಿ ಇಳಿಸಲಾಯಿತು. ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಹೆಚ್ ಕೋಟ್ಯಾನ್ ಸ್ವಾಗತಿಸಿ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಶೇಖರ್ ಕುಕ್ಕೆಡಿ ವಂದಿಸಿದರು.

