Home » Supreme Court : ಸುಪ್ರೀಂ ಕೋರ್ಟ್ ನಿಂದ ಯುವಕನಿಗೆ ದಯಾಮರಣ – ಆದೇಶ ನೀಡುವಾಗ ನ್ಯಾಯಮೂರ್ತಿಗಳಿಂದ ಕಣ್ಣೀರು !!

Supreme Court : ಸುಪ್ರೀಂ ಕೋರ್ಟ್ ನಿಂದ ಯುವಕನಿಗೆ ದಯಾಮರಣ – ಆದೇಶ ನೀಡುವಾಗ ನ್ಯಾಯಮೂರ್ತಿಗಳಿಂದ ಕಣ್ಣೀರು !!

0 comments

Supreme Court : 13 ವರ್ಷದಿಂದ ಕೋಮಾದಲ್ಲಿರುವ 32 ವರ್ಷದ ವ್ಯಕ್ತಿಯ ದಯಾಮರಣಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.  ಇದು ಭಾರತದಲ್ಲಿ ನ್ಯಾಯಾಲಯವು ನೀಡಿದ ಮೊದಲ ದಯಾಮರಣ ಪ್ರಕರಣ ಎಂದು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಆದರೆ ಈ ಪ್ರಕರಣದ ಆದೇಶವನ್ನು ನೀಡುವಾಗ ನ್ಯಾಯಮೂರ್ತಿಗಳು ಕಣ್ಣೀರು ಹಾಕಿದ್ದಾರೆ.

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ತನ್ನ ಮಗನಿಗೆ ದಯಾಮರಣಕ್ಕೆ ಕೋರಿ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ನೀಡಿದೆ. ರೋಗಿಯ ಆರೋಗ್ಯ ಸ್ಥಿತಿಯ ಕುರಿತು ಎರಡು ವೈದ್ಯಕೀಯ ಮಂಡಳಿಗಳ ಅಭಿಪ್ರಾಯಗಳನ್ನು ಪರಿಗಣಿಸಿ ತೀರ್ಪು ಪ್ರಕಟಿಸಿದೆ. ನ್ಯಾಯಾಲಯವು ತನ್ನ ಮಾರ್ಗಸೂಚಿಗಳ ಅಡಿಯಲ್ಲಿ ನಿಷ್ಕ್ರಿಯ ದಯಾಮರಣವನ್ನು ಅನುಮತಿಸಿದ ಮೊದಲ ಪ್ರಕರಣ ಇದಾಗಿದೆ.

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹರೀಶ್ ರಾಣಾ (Harish Rana) 2013 ರಲ್ಲಿ ಪೇಯಿಂಗ್ ಗೆಸ್ಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಹರೀಶ್‌ ರಾಣಾ ಪೋಷಕರು ಮಗನಿಗೆ ದಯಾಮರಣ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದರು. ಈ ವೇಳೆ ಸುಪ್ರೀಂ ಕೋರ್ಟ್ ದಯಾಮರಣ ಕರುಣಿಸಿ ಆದೇಶ ಹೊರಡಿಸಿದೆ. ಅಲ್ಲದೆ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಭಾವನಾತ್ಮಕ ಪೀಠವು 2018 ರ ಸುಪ್ರೀಂ ಕೋರ್ಟ್ ತೀರ್ಪಿನ ಹಲವಾರು ಅಂಶಗಳನ್ನು ಸ್ಪಷ್ಟಪಡಿಸಿ ಈ ತೀರ್ಪು ನೀಡಿದೆ. 

ತೀರ್ಪು ನೀಡುವಾಗ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ರಾಣಾ ಪೋಷಕರನ್ನುದ್ದೇಶಿಸಿ ಮಾತನಾಡಿದ ಅವರು, ‘ನೀವು ನಿಮ್ಮ ಮಗನನ್ನು ಕೈಬಿಡುತ್ತಿಲ್ಲ. ಬದಲಾಗಿ ಅವನಿಗೆ ಘನತೆಯಿಂದ ಈ ಲೋಕದಿಂದ ನಿರ್ಗಮಿಸಲು ದಾರಿ ಮಾಡಿಕೊಡುತ್ತಿದ್ದೀರಿ. ಇದು ಕರುಣೆ ಮತ್ತು ಧೈರ್ಯದ ಕೆಲಸ’ ಎಂದು ಗದ್ಗದಿತರಾದರು. ‘ನಮ್ಮ ನಿರ್ಧಾರ ಕೇವಲ ಕಾನೂನಿನ ತರ್ಕವಲ್ಲ; ಇದು ಪ್ರೀತಿ, ವೈದ್ಯಕೀಯ ವಿಜ್ಞಾನ ಮತ್ತು ಮಾನವೀಯತೆಯ ಸಂಗಮವಾಗಿದೆ’ ಎಂದು ಅವರು ಹೇಳಿದರು.

banner

ಅಲ್ಲದೆ ಯಾವಾಗ ಒಬ್ಬ ವ್ಯಕ್ತಿ ತಾನಾಗಿಯೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲವೋ ಅಂತಹ ಸಂದರ್ಭದಲ್ಲಿ ರೋಗಿಯ ಹಿತಾಸಕ್ತಿ ಏನೆಂಬುದನ್ನು ಮಾತ್ರ ಪರಿಗಣಿಸಬೇಕು. ಜೀವವನ್ನು ಕೃತಕವಾಗಿ ವಿಸ್ತರಿಸುವುದು ರೋಗಿಗೆ ನೀಡುವ ಹಿಂಸೆಯಾಗಬಾರದು ಎಂದು ಪೀಠ ಅಭಿಪ್ರಾಯಪಟ್ಟಿದೆ.

You may also like