Homelatestಭಾವಿ ಪತಿಯ 'ಕಣ್ಣಿಗೆ ಬಟ್ಟೆ ಕಟ್ಟಿ' ಸರ್ಪೈಸ್ ಕೊಡ್ತೀನಿ ಎಂದು ಕತ್ತು ಸೀಳಿದ ಯುವತಿಯ ಕೃತ್ಯದ...

ಭಾವಿ ಪತಿಯ ‘ಕಣ್ಣಿಗೆ ಬಟ್ಟೆ ಕಟ್ಟಿ’ ಸರ್ಪೈಸ್ ಕೊಡ್ತೀನಿ ಎಂದು ಕತ್ತು ಸೀಳಿದ ಯುವತಿಯ ಕೃತ್ಯದ ಹಿಂದಿತ್ತು ಭಯಾನಕ ಸಂಚು!!!

Hindu neighbor gifts plot of land

Hindu neighbour gifts land to Muslim journalist

ಈಗಿನ ಕಾಲದಲ್ಲಿ ತಂದೆತಾಯಿಯಂದಿರು ಮಕ್ಕಳು ಆದಷ್ಟು ಬೇಗ ಮದುವೆ ಮಾಡಿ ಸೆಟ್ಲ್ ಆಗಲಿ ಎಂದು ಬಯಸುವುದು ಸಹಜ. ಗಂಡು, ಹುಡುಗಿ ಇಬ್ಬರ ಒಪ್ಪಿಗೆ ಪಡೆದು ಮದುವೆ ಕೆಲಸ ಮುಂದುವರಿಸಿದರೂ, ಹುಡುಗ ತಾಳಿ ಕಟ್ಟುವವರೆಗೆ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಅಂಥದ್ದೇ ಒಂದು ಭಯ ಹುಟ್ಟಿಸುವ ಘಟನೆಯೊಂದು ಇತ್ತೀಚೆಗೆ ನಡೆದಿದ್ದು, ಕುರಿತಾದ ವಿವರ ಇಲ್ಲಿದೆ.

ಇಲ್ಲೊಬ್ಬಳು ಸುಂದರಿ, ತಾನು ಮದುವೆ ಆಗುವ ಹುಡುಗನಿಗೆ ಸರ್ಪೈಸ್ ಗಿಫ್ಟ್ ಕೊಡಲು ಕರೆದು ಮಾಡಿದ ಆವಾಂತರದ ಕಥೆಯನ್ನು ಇಲ್ಲಿ ನೀಡಲಾಗಿದೆ.

ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಸರ್ಪ್ರೈಸ್ ಗಿಫ್ಟ್ ಕೊಡುವುದಾಗಿ ಕರೆದು ಭಾವಿ ಪತಿಯ ಕತ್ತು ಕೊಯ್ದಿದ್ದ ಯುವತಿಯೊಬ್ಬಳನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿ ಯುವತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಆಂಧ್ರದ ಅನಕಪಲ್ಲಿ ಜಿಲ್ಲೆಯ ರವಿಕಾಮತಮ್ ಮಂಡಲದ ಕೋಮಲಪುಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಿಲ್ಲೆಯಾದ್ಯಂತ ಭಾರೀ ಚರ್ಚೆಯನ್ನು ಹು ಹಾಕಿತ್ತು‌

ಯುವಕನ ಕತ್ತು ಕೊಯ್ದ ಯುವತಿಯ ಹೆಸರು ಪುಷ್ಪಾ, ಮದುವೆ ಇಷ್ಟವಿಲ್ಲದಿದ್ದಕ್ಕೆ ಈ ಕೃತ್ಯ ಎಸಗಿದೆ ಎಂದು ಪುಷ್ಪಾ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಬಂಧನ ಮಾಡಿ ವಿಶಾಖಪಟ್ಟಣಂ ಜೈಲಿಗೆ ಅಟ್ಟಿದ್ದಾರೆ.

ಯುವಕ ರಾಮು ನಾಯ್ಡು ಹೈದರಾಬಾದ್‌ನ
ಸಿಎಸ್‌ಐಆರ್‌ನಲ್ಲಿ ವಿಜ್ಞಾನಿಯಾಗಿ ಉದ್ಯೋಗದಲ್ಲಿದ್ದು, ಈತನ ಮದುವೆ ಪುಷ್ಪಾ ಜತೆ ಮೇ 26ರಂದು ನಡೆಯಬೇಕಿತ್ತು. ಎರಡೂ ಮನೆಯವರು ಮದುವೆಗೆ ಬೇಕಾದ ತಯಾರಿಯನ್ನು ನಡೆಸುತ್ತಿದ್ದರು. ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಿಕೆ ಮಾಡಲಾಗಿತ್ತು. ಇತ್ತ ಪುಷ್ಪಾ ಕೂಡ ರಾಮ ನಾಯ್ಡು ಜತೆ ಆಗಾಗ ಫೋನ್‌ನಲ್ಲಿ ಮಾತನಾಡುತ್ತಳೂ ಇದ್ದಳು.

ಹೀಗಿರುವಾಗ ಒಂದು ದಿನ ತನ್ನ ಭಾವಿ ಪತಿಯನ್ನು ಕರೆದಿದ್ದ ಪುಷ್ಪಾ ತನ ಫ್ರೆಂಡ್ಸ್‌ಗಳಿಗೆ ಪರಿಚಯ ಮಾಡಿಕೊಡಲು ಜತೆಗೆ ಕರೆದೊಯ್ಯವುದಾಗಿ ಹೇಳಿದ್ದಾಳೆ. ಜತೆಗೆ ಕರೆದೊಯ್ದಿ ಪುಷ್ಪಾ ಮಾರ್ಗ ಮಧ್ಯದಲ್ಲಿ ಫ್ಯಾನ್ಸಿ ಶಾಪ್‌ನಲ್ಲಿ ಗಿಫ್ಟ್ ಆಗಿ ಸ್ಟೈಲಿಶ್ ಚಾಕು ಕೊಂಡು ತಗೊಂಡಿದ್ದಾಳೆ. ಬಳಿಕ ಇಬ್ಬರು ಕೊಮಲಪುಡಿಯಲ್ಲಿರುವ ಅಮರಪುರಿ ಆಶ್ರಮ ಕಡೆಗೆ ಭಾವಿ ಪತಿಯನ್ನು ಕರೆದೊಯ್ದಳು. ಇದಾದ ಬಳಿಕ ಸರ್ಪ್ರೈಸ್ ಗಿಫ್ಟ್ ಕೊಡುವುದಾಗಿ ಹೇಳಿ ಕಣ್ಣಿಗೆ ಬಟ್ಟೆ ಕಟ್ಟುತ್ತೇನೆಂದು ಹೇಳಿದ ಯುವತಿ ತನ್ನ ದುಪ್ಪಟ್ಟದಿಂದ ಭಾವಿ ಪತಿಯ ಕಣ್ಣು ಮುಚ್ಚಿದ್ದಾಳೆ. ಕಟ್ಟಿದ್ದೇ ತಡ ಆತನ ಕತ್ತನ್ನು ಚಾಕುವಿನಿಂದ ಕೊಯ್ದಿದ್ದಾಳೆ.

ಭಾವಿ ಪತ್ನಿಯ ಕೃತ್ಯದಿಂದ ಶಾಕ್ ಆದ ರಾಮು ನಾಯ್ಡು, ಅಲ್ಲಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆತ ಏನು ಬೇಕಾದರೂ ಮಾಡಬಹುದು ಅಂದುಕೊಂಡ ಪುಷ್ಪಾ ಆತನನ್ನು ತಾನು ಹಿಂಬಾಲಿಸಿದ್ದಾಳೆ. ಮತ್ತೊಬ್ಬ ವ್ಯಕ್ತಿಯ ಸಹಾಯದಿಂದ ರಾಮು ನಾಯ್ಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ರಾಮು ನಾಯ್ಡುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದೆಲ್ಲ ತಾನು ಮಾಡಿದ ಕೃತ್ಯ ಎಂದು ಯಾರಿಗೂ ಗೊತ್ತಾಗಬಾರದೆಂದು ಸೆಲ್ಫೀ ಎಲ್ಲ ಕ್ಲಿಕ್ ಮಾಡಿದ್ದಾಳೆ. ತಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆ ಇಲ್ಲ ತೋರಿಸಿಕೊಳ್ಳಲು ಈ ರೀತಿಯಾಗಿ ಫೋಟೋ ಕ್ಲಿಕ್ಕಿಸಿದ್ದಾಳೆ. ಇದಾದ ಬಳಿಕ ಸರ್ಪ್ರೈಸ್ ಗಿಫ್ಟ್ ಕೊಡುವುದಾಗಿ ಹೇಳಿ ತನ್ನ ಕೃತ್ಯ ಎಸಗಿದ್ದಾಳೆ. ಪುಷ್ಪಾಳ ಮುಖವಾಡ ಸದ್ಯ ಬಯಲಾಗಿದ್ದು, ಆಕೆಯನ್ನು ಜೈಲಿಗೆ ಕಳುಹಿಸಲಾಗಿದೆ. ಪುಷ್ಪಾಗೆ ಯಾಕೆ ಮದುವೆ ಇಷ್ಟವಿರಲಿಲ್ಲ ಎಂಬುದು ಇನ್ನು ನಿಗೂಢವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES

Most Popular

Recent Comments