Home latest ದಾರಿ ಮಧ್ಯೆ ಆಂಬ್ಯುಲೆನ್ಸ್ ನಲ್ಲಿದ್ದ ಆಕ್ಸಿಜನ್ ಖಾಲಿ : ಬಾಣಂತಿ ಸಾವು

ದಾರಿ ಮಧ್ಯೆ ಆಂಬ್ಯುಲೆನ್ಸ್ ನಲ್ಲಿದ್ದ ಆಕ್ಸಿಜನ್ ಖಾಲಿ : ಬಾಣಂತಿ ಸಾವು

Hindu neighbor gifts plot of land

Hindu neighbour gifts land to Muslim journalist

ಹೆರಿಗೆಗೆಂದು ದಾಖಲಾದ ಮಹಿಳೆಯೋರ್ವಳು ಮಗು ಹೆತ್ತು, ಮರುದಿನ ದಿಢೀರನೆ ಸಾವನ್ನಪ್ಪಿದ್ದ ಘಟನೆಯೊಂದು ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸವದತ್ತಿ ಪಟ್ಟಣದ ನಿವಾಸಿ ವಿದ್ಯಶ್ರೀ ಸುರೇಶ ಬೆಂಚಿಗೇರಿ (25) ಎಂಬಾಕೆಯೇ ಸಾವನ್ನಪ್ಪಿದ ಬಾಣಂತಿ. ವಿದ್ಯಶ್ರೀ ಏಪ್ರಿಲ್ 04 ರಂದು ಸದವತ್ತಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು,
ಮಹಿಳೆ ಮತ್ತು ಮಗುವಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆಯನ್ನೂ ಮಾಡಿಸಿದ್ದರು. ಮಗುವಿಗೆ ಜನ್ಮವಿತ್ತ ಮಹಿಳೆ ಮತ್ತು ಮಗು ಆರೋಗ್ಯವಾಗಿಯೇ ಇದ್ದರು. ಆದರೆ ಇಂದು ಇದ್ದಕ್ಕಿದ್ದಂತೆ ವಲ್ಮರಿ ಎಂಬೋಲಿಸಂ ಸಮಸ್ಯೆ (ಬಾಣಂತಿಗೆ ಉಸಿರಾಟದ ಸಮಸ್ಯೆ) ಕಾಣಿಸಿಕೊಂಡಿದೆ.

ಸವದತ್ತಿ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆ ಆಕ್ಸಿಜನ್ ಖಾಲಿಯಾಗಿ ಬಾಣಂತಿ ಸಾವನ್ನಪ್ಪಿದ್ದು, ಸಮಗ್ರ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.