Homelatestಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಒಂದು ಫೋಟೋ, ಒಂದು ಕಮೆಂಟ್ ಸಹಪಾಠಿಯ ಪ್ರಾಣವನ್ನೇ ಕಸಿಯಿತು|

ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಒಂದು ಫೋಟೋ, ಒಂದು ಕಮೆಂಟ್ ಸಹಪಾಠಿಯ ಪ್ರಾಣವನ್ನೇ ಕಸಿಯಿತು|

Hindu neighbor gifts plot of land

Hindu neighbour gifts land to Muslim journalist

ಕಾಲೇಜಿನಲ್ಲಿ ತನ್ನ ಜೊತೆಗೇ ಕಲಿಯುತ್ತಿದ್ದ ವಿದ್ಯಾರ್ಥಿನಿಯೋರ್ವಳನ್ನು ವಿದ್ಯಾರ್ಥಿಯೋರ್ವ ಕೊಂದಿದ್ದು, ಈಗ ಬಂಧಿಸಲಾಗಿದೆ.

ಹತ್ಯೆಯಾದ ಯುವತಿ ವಂಶಿಕಾ ಬನ್ಸಾಲ್. ಡೆಹ್ರಡೂನ್ ನ ಸಿದ್ಧಾರ್ಥ ಕಾಲೇಜಿನಲ್ಲಿ ಡಿ ಫಾರ್ಮಾ ಓದುತ್ತಿದ್ದ ಹುಡುಗಿ. ಆರೋಪಿಯ ಹೆಸರು ಆದಿತ್ಯ ತೋಮರ್.

ವಂಶಿಕಾ ತನ್ನ ಸ್ನೇಹಿತೆಯರೊಂದಿಗೆ ಹೊರಗೆ ಹೋಗಿದ್ದ ಸಂದರ್ಭ ನೋಡಿಕೊಂಡು ಕೊಂದಿದ್ದಾನೆ. ವಂಶಿಕಾ ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು‌

ವಂಶಿಕಾ ಬನ್ಸಾಲ್ ಡೆಹ್ರಾಡೂನ್ ನಲ್ಲಿರುವ ಕಾಲೇಜು ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು. ಗುರುವಾರ ಸಂಜೆ ಆಕೆ ತನ್ನ ಸ್ನೇಹಿತೆ ಮಮತಾ ಎಂಬಾಕೆಯೊಂದಿಗೆ ಕಾಲೇಜು ಹಾಸ್ಟೆಲ್ ನ ಬಳಿಯೇ ಇರುವ ಒಂದು ಅಂಗಡಿಯಲ್ಲಿ ನಿಂತಿದ್ದಾಗ ಅಲ್ಲಿಗೆ ಬಂದ‌ ಆದಿತ್ಯ ತೋಮರ್ ವಂಶಿಕಾಳನ್ನು ಎಳೆದಾಡಿ ತನ್ನ ಬೈಕ್ ನಲ್ಲಿ ಕುಳಿತುಕೊಳ್ಳುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಒಪ್ಪದ ವಂಶಿಕಾ ಮೇಲೆ ಗುಂಡು ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ. ಬೈಕ್ , ಗನ್ ಗಳನ್ನು ಅಲ್ಲೇ ಬಿಟ್ಟು ಹೋಗಿದ್ದ. ವಂಶಿಕಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ನಂತರ ಪೊಲೀಸರು ಬಂದು ಸ್ಥಳೀಯರು ನೀಡಿದ ಮಾಹಿತಿಯಂತೆ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ವಿಚಾರಣೆ ವೇಳೆ ಆದಿತ್ಯ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತಾನ್ಯಾಕೆ ಆಕೆಯ ಮೇಲೆ ಶೂಟ್ ಮಾಡಿದೆ. ಏನು ಕಾರಣ ಎಲ್ಲಾ ಹೇಳಿದ್ದಾನೆ.

ಒಂದು ತಿಂಗಳ ಹಿಂದೆ ವಂಶಿಕಾ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದಳು. ಆ ಫೋಟೋಗೆ ಆದಿತ್ಯ ಒಂದು ಕಮೆಂಟ್ ಮಾಡಿದ್ದ. ಇದೇ ಕಮೆಂಟ್ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಪ್ರಾರಂಭ ಆಗಿದೆ.

ವಂಶಿಕಾ ಮತ್ತು ಆದಿತ್ಯ ಸಹಪಾಠಿಗಳಾಗಿದ್ದರಿಂದ ಇಬ್ಬರ ಸ್ನೇಹಿತರು ಗೊತ್ತಿರುವವರೇ ಆಗಿದ್ದರು. ಆದಿತ್ಯ ತಾನು ಮಾಡಿದ ಕಮೆಂಟ್ ವಿಷಯದಲ್ಲಿ ವಂಶಿಕಾಳತ್ರ ಕ್ಷಮೆ ಕೇಳುವಂತೆ ವಂಶಿಕಾ ಸ್ನೇಹಿತರು ವಂಶಿಕಾಳ ಕಾಲುಮುಟ್ಟಿ ಕ್ಷಮೆ ಕೇಳುವಂತೆ ಮಾಡಿದ್ದರು. ಇದು ತನಗೆ ಮಾಡಿದ ಅಪಮಾನ ಎಂದು ಆದಿತ್ಯ ತೋಮರ್ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದ. ವಂಶಿಕಾ ಬಳಿ ಮತ್ತೆ ಜಗಳವಾಡಿದ್ದ. ಆ ಕೋಪದಿಂದಲೇ ಆತ ವಂಶಿಕಾ ಮೇಲೆ ಹಾಡುಗಲೇ ಗುಂಡು ಹಾರಿಸಿದ್ದ.

RELATED ARTICLES

Most Popular

Recent Comments