Home latest ತನ್ನ ಕರುಳಕುಡಿಯನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ ತಾಯಿ| ಪವಾಡಸದೃಶವಾಗಿ ಮಗು ಪಾರು!

ತನ್ನ ಕರುಳಕುಡಿಯನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ ತಾಯಿ| ಪವಾಡಸದೃಶವಾಗಿ ಮಗು ಪಾರು!

Hindu neighbor gifts plot of land

Hindu neighbour gifts land to Muslim journalist

ತಾಯಿಯೊಬ್ಬಳು ತನ್ನ ಹೆತ್ತ ಕಂದನನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿರುವ ಘಟನೆಯೊಂದು ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ.

ಆದರೆ ತಾಯಿಗೆ ಬೇಡವಾದ ಮಗು ಅರ್ಧಂಬರ್ಧ ಸಮಾಧಿಯಾಗಿದ್ದ ಪುಟ್ಟ ಕಂದ ಪವಾಡಸದೃಶವಾಗಿ ಬದುಕಿ ಉಳಿದಿದೆ.

ಬಸ್ತಿಯ ಜಿಲ್ಲಾಸ್ಪತ್ರೆಯ ಬಳಿ ಇಂಥದ್ದೊಂದು ಘಟನೆ ನಡೆದಿದೆ. ಈ ಆಸ್ಪತ್ರೆಯಲ್ಲಿ ಹೆರಿಗೆ ನಂತರ ತಾಯಿಯೊಬ್ಬಳು ಇಂಥ ಹೀನ ಕೃತ್ಯಕ್ಕೆ ಮುಂದಾಗಿದ್ದು ನೋಡಿದರೆ ಆಕೆ ಹೃದಯ ಅಲ್ಲದವಳೇ ಅಂತ ಅನಿಸುತ್ತದೆ. ಮಗು ಹೆಣ್ಣು ಎಂಬ ಕಾರಣಕ್ಕೋ ಅಥವಾ ಇನ್ನಾವುದೋ ಕಾರಣಕ್ಕೋ ಏನೋ ಒಟ್ಟಿನಲ್ಲಿ ಮಗು ಹುಟ್ಟಿದ ಬಳಿ ಅದನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ್ದರೂ ಮಗು ದೇವರ ದಯೆಯಿಂದ ಬದುಕಿ ಉಳಿದಿದೆ.

ಭೂಮಿಯನ್ನು ಅಗೆದು ಮಗುವನ್ನು ಗುಂಡಿಯೊಳಗೆ ಮುಚ್ಚಲು ಯತ್ನಿಸಿದ್ದಾಳೆ ತಾಯಿ. ಆಗ ಮಗು ಜೋರಾಗಿ ಅತ್ತಿದೆ. ಯಾರಿಗಾದರೂ ಸಂದೇಹ ಬಂದುಬಿಟ್ಟರೆ ಎಂದುಕೊಂಡ ಮಹಿಳೆ ಮಗುವನ್ನು ಅರ್ಧಂಬರ್ಧ ಮಣ್ಣಿನಿಂದ ಮುಚ್ಚಿ ಪರಾರಿಯಾಗಿದ್ದಾಳೆ. ಮಗು ಅಳುತ್ತಲೇ ಇತ್ತು. ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಗೆ ಅಳುವಿನ ಶಬ್ದ ಕೇಳಿದ್ದು, ಅತ್ತ ಹೋದಾಗ ಮಗು ಮಣ್ಣಿನಲ್ಲಿ ಹೂತು ಹೋಗಿರುವುದು ಕಂಡಿದೆ. ಮಗುವಿನ ದೇಹದ ಅರ್ಧ ಭಾಗವು ಹೊರಗೆ ಮತ್ತು ಅರ್ಧ ನೆಲದೊಳಗೆ ಇತ್ತು.

ಮಹಿಳೆ ಕೂಡಲೇ ಜಿಲ್ಲಾಸ್ಪತ್ರೆಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ ಅದನ್ನು ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ದಾಖ ಮಾಡಲಾಯಿತು. ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಿ ಮಗುವಿನ ಜೀವ ಉಳಿಸಿದ್ದಾರೆ.