Home latest ಲಸಿಕೆ ಹಾಗೂ ವೈರಸ್ ಬಗ್ಗೆ ಮಾಹಿತಿ ನೀಡುವುದಾಗಿ ಮನೆಮಂದಿಯನ್ನು ನಂಬಿಸಿ ಮನೆಯೊಳಗೆ ನುಗ್ಗಿದ ಖತಾರನಾಖ್ ಗ್ಯಾಂಗ್!!!...

ಲಸಿಕೆ ಹಾಗೂ ವೈರಸ್ ಬಗ್ಗೆ ಮಾಹಿತಿ ನೀಡುವುದಾಗಿ ಮನೆಮಂದಿಯನ್ನು ನಂಬಿಸಿ ಮನೆಯೊಳಗೆ ನುಗ್ಗಿದ ಖತಾರನಾಖ್ ಗ್ಯಾಂಗ್!!! ಆ ಬಳಿಕ ಅಲ್ಲಿ ನಡೆದಿದ್ದೇ ಬೇರೆ

Hindu neighbor gifts plot of land

Hindu neighbour gifts land to Muslim journalist

ಹೊಸ ವೈರಸ್ ಬಗ್ಗೆ ಅರಿವು ಮೂಡಿಸುವುದು ಹಾಗೂ ಲಸಿಕೆ ಕೊಡುವುದು ನಮ್ಮ ಕರ್ತವ್ಯ, ನಾವು ಆರೋಗ್ಯ ಇಲಾಖೆಯಿಂದ ಬಂದಿದ್ದೇವೆ ಎಂದು ಮನೆಮಂದಿಯನ್ನು ನಂಬಿಸಿ ಮನೆಯೊಳಗೆ ನುಗ್ಗಿ ದರೋಡೆ ನಡೆಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಬೆಂಗಳೂರಿನ ಯಶವಂತಪುರದಲ್ಲಿ ಘಟನೆ ನಡೆದಿದ್ದು, ಸಂಪತ್ ಸಿಂಗ್ ಎಂಬವರ ಮನೆಗೆ ತೆರಳಿದ ದರೋಡೆಕೋರರ ಗ್ಯಾಂಗ್, ನಾವು ವಾಕ್ಸಿನ್ ನೀಡಲು ಬಂದಿದ್ದೇವೆ ಎಂದು ಮನೆಯಲ್ಲಿದ್ದ ಹೆಂಗಸರನ್ನು ನಂಬಿಸಿದ್ದಾರೆ. ಇದಾದ ಬಳಿಕ ಮನೆಯೊಳಗೆ ತೆರಳಿದ ತಂಡ ಮನೆ ಮಂದಿಗೆ ಗನ್ ತೋರಿಸಿ ಬೆದರಿಸಿದೆ.

ಹಣೆಗೆ ಗನ್ ಇಟ್ಟು ಬೆದರಿಸಿದ ಬಳಿಕ ಮನೆಯ ಲಾಕರ್ ನಲ್ಲಿದ್ದ ನಗದು ಸಹಿತ ಚಿನ್ನಭರಣ ದೋಚಿ ಪರಾರಿಯಾಗಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.