Home latest ಕ್ಷುಲ್ಲಕ ಕಾರಣಕ್ಕೆ ಫೋನ್ ನಲ್ಲಿ ಜಗಳ ಮಾಡಿಕೊಂಡ ಪ್ರೇಮಿಗಳು | ಸಾವಿನಲ್ಲೇ ಅಂತ್ಯಗೊಂಡ ಪ್ರೀತಿ!

ಕ್ಷುಲ್ಲಕ ಕಾರಣಕ್ಕೆ ಫೋನ್ ನಲ್ಲಿ ಜಗಳ ಮಾಡಿಕೊಂಡ ಪ್ರೇಮಿಗಳು | ಸಾವಿನಲ್ಲೇ ಅಂತ್ಯಗೊಂಡ ಪ್ರೀತಿ!

Hindu neighbor gifts plot of land

Hindu neighbour gifts land to Muslim journalist

ಕ್ಷುಲ್ಲಕ ಕಾರಣದಿಂದಾಗಿ ಜಗಳ ನಡೆದು ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

ಸಿಎಗೆ ತಯಾರಿ ನಡೆಸುತ್ತಿದ್ದ ಬಿಹಾರದ ಮುಜಾಫರ್‌ಪುರ ನಿವಾಸಿ ಅಂಜಲಿ ( 23 ವರ್ಷ) ಎಂಬ ಯುವತಿ ಜೈಪುರದಲ್ಲಿ ನೆಲೆಸಿರುವ ತನ್ನ ಗೆಳೆಯ ವಿವೇಕ್ ಜೊತೆಗೆ ಜಗಳವಾಡಿದ್ದಾಳೆ. ಅನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇತ್ತ ಕಡೆ ತನ್ನ ಗೆಳತಿಯ ಸಾವಿನ ಸುದ್ದಿ ತಿಳಿದ ನಂತರ ಗೆಳೆಯ ವಿವೇಕ್ ಕೂಡ ಜೈಪುರದ 8 ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ.

ಬುಧವಾರ ರಾತ್ರಿ 9 ಗಂಟೆಗೆ ಪ್ರೇಮಿಗಳಾದ ಅಂಜಲಿ ಮತ್ತು ವಿವೇಕ್ ನಡುವೆ ಜಗಳವಾಗಿತ್ತು. ಸಂಭಾಷಣೆಯ ಸಮಯದಲ್ಲಿ, ಮುಜಾಫರ್‌ಪುರದ ಇವರಿಬ್ಬರಿಗೂ ಸಾಮಾನ್ಯ ಸ್ನೇಹಿತರಾಗಿರುವ ಒಬ್ಬರು ಕೂಡ ಈ ಕಾನ್ಸರೆನ್ಸ್ ಕರೆಯಲ್ಲಿ ಇದ್ದರು. ಈ ಇಬ್ಬರನ್ನು ಸಮಾಧಾನಪಡಿಸಲು ಆ ವ್ಯಕ್ತಿ ಪ್ರಯತ್ನ ಪಟ್ಟಿದ್ದಾರೆ. ಆದರೆ ಅದೆಲ್ಲವೂ ನಡೆಯಲಿಲ್ಲ. ಜಗಳದ ನಂತರ ವಿವೇಕ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಇತ್ತ ಕಡೆ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಘಟನೆಯ ನಂತರ ಅಂಜಲಿಯ ಸಹೋದರ ವಿವೇಕ್ ಗೆ ಕರೆ ಮಾಡಿ, ಬೆದರಿಕೆ ಹಾಕಿದ್ದಾನೆ. ಅಂಜಲಿಯ ಸಹೋದರನೊಂದಿಗೆ ಮಾತನಾಡಿದ ನಂತರ ವಿವೇಕ್ ಕೂಡಾ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.