Home » Kerala: ಅಂಗಾಂಗ ದಾನ ಮಾಡಿದ 10 ತಿಂಗಳ ಮಗುಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ !!

Kerala: ಅಂಗಾಂಗ ದಾನ ಮಾಡಿದ 10 ತಿಂಗಳ ಮಗುಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ !!

0 comments

Kerala: ಅಪಘಾತದಲ್ಲಿ ತೀವ್ರ ಗಾಯಗೊಂಡು ಬ್ರೈನ್ ಡೆಡ್ ಆಗಿ ಹತ್ತು ತಿಂಗಳ ಮಗುವೊಂದು ಮೃತಪಟ್ಟಿದೆ. ಆದರೆ ಆ ಪುಟ್ಟ ಕಂದ ತನ್ನ ಸಾವಿನಲ್ಲೂ ಹಲವರಿಗೆ ಜೀವದಾನ ಮಾಡಿದೆ. ಹಾಗಾಗಿ ಆ ಹಸುಗೂಸಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಹೌದು, ಕೇರಳದ ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿ ನಿವಾಸಿಗಳಾದ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಅವರ ಮಗು ಶೆರಿನ್, ಫೆಬ್ರುವರಿ 5ರಂದು ಎಂಸಿ ರಸ್ತೆಯ ಕೊಟ್ಟಾಯಂ ಬಳಿಯ ಪಲ್ಲಂನಲ್ಲಿ ತನ್ನ ತಾಯಿ ಮತ್ತು ಅಜ್ಜ-ಅಜ್ಜಿಯರೊಂದಿಗೆ ಪ್ರಯಾಣಿಸುತ್ತಿದ್ದ ಮಗು ಆಲಿನ್ ಶೆರಿನ್ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿತ್ತು. ತೀವ್ರ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಮಗುವಿನ ಬ್ರೈನ್ ಡೆಡ್ ಆಗಿದೆ ಎಂದು ಫೆಬ್ರುವರಿ 12ರಂದು ವೈದ್ಯರು ದೃಢಪಡಿಸಿದ್ದರು. ಹೀಗಾಗಿ ಬ್ರೈನ್ ಡೆಡ್ ಆಗಿ ಮೃತಪಟ್ಟ ಮಗುವಿನ ಅಂಗಾಂಗ ದಾನ ಮಾಡಲಾಗಿದೆ. ಕಿಡ್ನಿ, ಯಕೃತ್ತು, ಕಣ್ಣು. ಹೃದಯ ಕವಾಟಗಳನ್ನು ದಾನ ಮಾಡಲಾಗಿದೆ. ಇವುಗಳನ್ನು ಅಗತ್ಯವಿರುವ ಐದು ಜನರಿಗೆ ಕಸಿ ಮಾಡಲು ನಿರ್ಧರಿಸಲಾಗಿದೆ.

ಮಗುವಿನ ಪೋಷಕರ ಒಪ್ಪಿಗೆಯೊಂದಿಗೆ, ಅಂಗಾಂಗ ದಾನ ಪ್ರಕ್ರಿಯೆಯನ್ನು ಕೇರಳ ರಾಜ್ಯದ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ(ಕೆ-ಸೊಟ್ಟೊ) ಮೂಲಕ ನಡೆಸಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಧ್ಯ ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿಯಲ್ಲಿ ಮಗು ಆಲಿನ್ ಶೆರಿನ್ ಅಬ್ರಹಾಂ ಅಂತ್ಯ ಸಂಸ್ಕಾರ ನಡೆದಿದ್ದು, ಮಂತ್ರಿಗಳ ಜೊತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಹಲವು ಜನರು ಭಾಗವಹಿಸಿದ್ದರು. ರಾಜ್ಯ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. 

ಅಂಗಾಂಗ ದಾನ ಮಾಡಿದ ಅಲಿನ್ ಶೆರಿನ್ ರಾಜ್ಯದಲ್ಲಿ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದ್ದಾಳೆ. ಅತ್ಯಂತ ಕಿರಿಯ ಮಗು ಅಂಗಾಂಗ ದಾನದ ಮೂಲಕ ಯಕೃತ್ತು ಪಡೆಯುತ್ತಿದೆ. ಇಬ್ಬರು ಮಕ್ಕಳು ಇತಿಹಾಸದ ಭಾಗವಾಗಲಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ.

banner

You may also like