ತಿರುವನಂತಪುರಂ: ಪ್ರಯಾಗ್ರಾಜ್ನಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದ ನೀಲಿ ಕಣ್ಣಿನ ಚೆಲುವೆ ಮೊನಾಲಿಸಾ ಭೋಂಸ್ಲೇ ಇದೀಗ ತನ್ನ ಪ್ರೀತಿಗಾಗಿ, ಪ್ರಿಯಕರನಿಗಾಗಿ ಕೇರಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತಮ್ಮ ಪ್ರಿಯತಮನ ಜೊತೆ ಮದುವೆಯಾಗಲು, ಆತನೊಂದಿಗೇ ವಾಸಿಸಲು ಆತನನ್ನು ವಿವಾಹವಾಗಲು ತಮಗೆ ರಕ್ಷಣೆ ಕೋರಿ ಪೊಲೀಸರಲ್ಲಿ ಮೊನಾಲಿಸಾ ಕೋರಿದ್ದಾರೆ. ಪೊಲೀಸರ ಪ್ರಕಾರ, ಮೊನಾಲಿಸಾ ಮತ್ತು ಆಕೆಯ ಉತ್ತರ ಪ್ರದೇಶ ಮೂಲದ ಪ್ರಿಯತಮ ಚಿತ್ರತಂಡದ ಸದಸ್ಯರ ಜೊತೆ ಠಾಣೆಗೆ ಬಂದಿದ್ದು, ತನ್ನ ಇಚ್ಛೆಗೆ ವಿರುದ್ಧವಾಗಿ ತಂದೆ ತನ್ನನ್ನು ಮರಳಿ ಹುಟ್ಟೂರಿಗೆ ಕೊಂಡೊಯ್ಯಲು ನೋಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಜೋಡಿ ಇತ್ತೀಚೆಗೆ ಪೂವರ್ಗೆ ಚಿತ್ರೀಕರಣಕ್ಕೆಂದು ಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಒಂದೂವರೆ ವರ್ಷದ ಹಿಂದೆ ಪ್ರೇಮವಾಗಿದ್ದು, ಇದಕ್ಕೆ ಇವರ ಕುಟುಂಬಗಳು ವಿರೋಧಿಸಿದ್ದು, ಹಾಗಾಗಿ ಇಬ್ಬರೂ ಪೊಲೀಸ್ ಠಾಣೆಗೆ ಬಂದಿದ್ದಾರೆ. ಇಂದೋರ್ ಮೂಲದವರಾದ ಮೊನಾಲಿಸಾ, ಆಕೆಯ ಪ್ರಿಯಕರ ಫರ್ಮಾನ್ ಖಾನ್ ಮಹಾರಾಷ್ಟ್ರದವನು.
ತಾನು ತನ್ನ ತಂದೆಯ ಜೊತೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿರುವ ಮೊನಾಲಿಸಾ ತನ್ನ ಪ್ರಿಯತಮನನ್ನೇ ಮದುವೆಯಾಗುವುದಾಗಿ ಸ್ಪಷ್ಟಪಡಿಸಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇಬ್ಬರೂ ವಯಸ್ಕರಾಗಿರುವುದರಿಂದ ತಮ್ಮ ಇಚ್ಛೆಯ ರೀತಿ ಇಬ್ಬರೂ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ ಎಂದು ಹೇಳಿದ್ದಾರೆ
ಹಾಗೆ ಮೊನಾಲಿಸಾ ಮತ್ತು ಫರ್ಮಾನ್ ಖಾನ್ ವಿವಾಹ ಪೂವಾರ್ ಅರುಮನೂರ್ ನೈನಾರ್ ದೇವಸ್ಥಾನದಲ್ಲಿ ನಡೆಯಿತು.

