Home Entertainment ಚಪ್ಪಲಿ ಎಸೆದು ನಟ ದರ್ಶನ್‌ ವಿರುದ್ಧ ಪುನೀತ್‌ ಅಭಿಮಾನಿ ರಂಪಾಟ

ಚಪ್ಪಲಿ ಎಸೆದು ನಟ ದರ್ಶನ್‌ ವಿರುದ್ಧ ಪುನೀತ್‌ ಅಭಿಮಾನಿ ರಂಪಾಟ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ನಿನ್ನೆ ರಾತ್ರಿ ‘ಕ್ರಾಂತಿ’ ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ನಟ ದರ್ಶನ ವಿರುದ್ಧ ಪುನೀತ್ ಅಭಿಮಾನಿಯೊಬ್ಬ ಶೂ ಎಸೆದು ಅಪಮಾನ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ದರ್ಶನ್ ಅವರು ಪುನೀತ್ ವಿರುದ್ಧ ಮಾತನಾಡಿದ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ವಿಚಾರಕ್ಕೆ ಸಿಟ್ಟುಕೊಂಡ ಪುನೀತ್‌ ಅಭಿಮಾನಿಯೊಬ್ಬ ನಿನ್ನೆ ರಾತ್ರಿ ‘ಕ್ರಾಂತಿ’ ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ನಟಿ ರಚಿತಾ ರಾಮ್ ಮಾತನಾಡುವಾಗ ಜನರ ಗುಂಪಿನಿಂದ ವ್ಯಕ್ತಿಯೊಬ್ಬರ ನಟ ದರ್ಶನ್‌ ಮೇಲೆ ಶೂ ಎಸೆದು ಅಪಮಾನ ಮಾಡಿದ್ದಾರೆ .

ಬಳಿಕ ಡಾ. ಪುನೀತ್ ರಾಜಕುಮಾರ್ ಅವರ ಭಾವಚಿತ್ರ, ಧ್ವಜ, ಪೋಸ್ಟರ್ ಹಿಡಿದು ಕುಣಿದ್ದಾರೆ. ಬಳಿಕ ಚಿತ್ರತಂಡ ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ