ಪುತ್ತೂರು: ಮಹಿಳೆಯೊಬ್ಬರಿಂದ ಮೋಸದಿಂದ ಹಣ ಪಡೆದು ವಂಚನೆ ಮಾಡಿದ ಘಟನೆ ಆರ್ಯಾಪು ಗ್ರಾಮದ ಪರ್ಲಡ್ಕದ ಗೋಳಿಕಟ್ಟೆಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಗೋಳಿಕಟ್ಟೆ ನಿವಾಸಿ ಶಬೀನ್ ತಾಜ್ ಎನ್ನುವವರು ಹಣ ನೀಡಿ ವಂಚನೆಗೊಳಗಾದವರು. ಎರಡು ವರ್ಷಗಳ ಹಿಂದೆ ಬೆಂಗಳೂರಿನ ಹೊಸಕೋಟೆಯ ಸಲ್ಮಾನ್ ಖಾನ್ ಎಂಬುವವರ ಪರಿಚಯ ಆಗಿತ್ತು. ಸುಮಾರು 20 ದಿನಗಳ ಹಿಂದೆ ಸಲ್ಮಾನ್ ಖಾನ್ ಮನೆಗೆ ಬಂದಿದ್ದಾರೆ. ನನ್ನ ಮೊಬೈಲ್ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ.
ಮಾ.3 ರಂದು ಇನ್ಸ್ಟಾಗ್ರಾಂ ಮ್ಯಾಟ್ರಿಮೊನಿ ಮೂಲಕ ಪರಿಚಯವಾದ ಸರ್ಜಿಲ್ ಖಾನ್ ಯಾನೆ ರಾಜೀರ್ ಎನ್ನುವ ಅಪರಿಚಿತ ವ್ಯಕ್ತಿ ಹೆಸರಿನಲ್ಲಿ ವಾಟ್ಸಪ್ ಕರೆ ಮಾಡಿ, ವಿದೇಶದಿಂದ ಸಾಮಾಗ್ರಿಗಳನ್ನು ತರುವಾಗ ಮುಂಬೈ ಏರ್ಪೋರ್ಟ್ನಲ್ಲಿ ಕಸ್ಟಮ್ ಇಲಾಖೆಯಲ್ಲಿ ಸಿಕ್ಕಿ ಬಿದ್ದಿರುವುದಾಗಿ ತಿಳಿಸಿ, ಅಲ್ಲಿಂದ ಬಿಡಿಸಿಕೊಳ್ಳಲು ತುಂಬಾ ಹಣ ಬೇಕಾಗಿದೆ ಎಂದು ತನನ್ನು ನಂಬಿಸಿ ಮಾ.4 ರಿಂದ ಮಾ.13 ರ ತನಕ ಎಸ್ಬಿಐ, ಫೋನ್ ಪೇ, ಆಕ್ಸಿಸ್ ಬ್ಯಾಂಕ್ ಮೂಲಕ ಸುಮಾರು 20 ಬಾರಿ ಒಟ್ಟು ರೂ.15,91,000 ಹಣವನ್ನು ಮೋಸದಿಂದ ಪಡೆದು ವಂಚನೆ ಮಾಡಿದ್ದಾರೆʼ ಎಂದು ಆರೋಪಿಸಿ ಶಬೀನ್ ತಾಜ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
