Home » ಗರ್ಭಣಿ ಗೆಳತಿಗೆ ಗೋಲ್ಗಪ್ಪದಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನ, ಕಾಡಿನಲ್ಲಿ ಬಿಟ್ಟು ಬಂದ ಪ್ರಿಯಕರ

ಗರ್ಭಣಿ ಗೆಳತಿಗೆ ಗೋಲ್ಗಪ್ಪದಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನ, ಕಾಡಿನಲ್ಲಿ ಬಿಟ್ಟು ಬಂದ ಪ್ರಿಯಕರ

0 comments

Hindu neighbor gifts plot of land

Hindu neighbour gifts land to Muslim journalist

ಜಾರ್ಖಂಡ್‌: ಆತನಿಗಾಗಿ ತನ್ನ ಹೆತ್ತವರನ್ನೇ ಬಿಟ್ಟು ಬಂದಿದ್ದ ಮಹಿಳೆಯನ್ನು ಗರ್ಭಿಣಿ ಮಾಡಿ ನಂತರ ಆತನೇ ಆಕೆಯ ಕೊ*ಲೆ ಗೆ ಯತ್ನ ಮಾಡಿರುವ ಅಮಾನವೀಯ ಘಟನೆಯೊಂದು ಜಾರ್ಖಂಡ್‌ನಲ್ಲಿ ನಡೆದಿದೆ. ಗೋಲ್ಗಪ್ಪದಲ್ಲಿ ವಿಷ ಬೆರೆಸಿ ಗರ್ಭಿಣಿ ಪ್ರೇಯಸಿಯನ್ನು ಕೊಲೆ ಮಾಡಲು ವ್ಯಕ್ತಿ ಯತ್ನಿಸಿದ್ದು, ಮಹಿಳೆ ನಂತರ ರಕ್ತವಾಂತಿ ಮಾಡಿದ್ದಾಳೆ. ನಂತರ ಹೇಗೋ ತನ್ನ ಮನೆ ಮಂದಿಗೆ ಈ ವಿಷಯ ತಿಳಿಸುವಲ್ಲಿ ಯಶಸ್ವಿಯಾಗಿದ್ದಾಳೆ.

26 ವರ್ಷದ ಸಾಕೇತ್‌ ಕೇಸರಿ ಮತ್ತು 23 ವರ್ಷದ ಮಹಿಳೆ ಆರು ವರ್ಷಗಳಿಂದ ಸಂಬಂಧದಲ್ಲಿದ್ದ, ಒಂದು ವರ್ಷದ ಹಿಂದೆ ಮೊದಲ ಮಗು ಜನಿಸಿತ್ತು. ಆದರೆ ಸಮುದಾಯ ಇವರಿಬ್ಬರ ಸಂಬಂಧವನ್ನು ತಿರಸ್ಕರಿಸಿ ಬೇರೆ ಮಾಡಿತ್ತು. ಆದರೂ ಕೇಸರಿ ಕೆಲವು ತಿಂಗಳ ನಂತರ ಮತ್ತೆ ಆ ಮಹಿಳೆಯನ್ನು ಸಂಪರ್ಕ ಮಾಡಿ, ರಾಜಿ ಮಾಡಿಸಿದ್ದ. ಮದುವೆ ಆಗುವ ಭರವಸೆ ನೀಡಿದ್ದ. ಇದರಿಂದ ಆಕೆ ಮತ್ತೆ ಗರ್ಭಿಣಿಯಾಗಿದ್ದಾಳೆ.

ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಫೆ.21 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೇಸರಿ ಮಹಿಳೆಗೆ ಕರೆ ಮಡಿ ಏನಾದರೂ ತಿನ್ನಬೇಕು ಅನಿಸ್ತಿದೆಯಾ ಎಂದು ಕೇಳಿದ್ದಾನೆ. ಗೋಲ್ಗಪ್ಪ ತಿನ್ನುವ ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ.

ಆದರೆ ಗೋಲ್ಗಪ್ಪ ತಿಂದ ನಂತರ ಆಕೆಗೆ ವಾಂತಿಯಾಗಿದೆ. ರಕ್ತವಾಂತಿಯಾಗಿದೆ. ಸಂಜೆ 4 ಗಂಟೆಗೆ ಆರೋಪಿ ತನ್ನ ಗೆಳತಿಯ ವೈದ್ಯರ ಬಳಿಗೆ ಕರೆದೊಯ್ಯಲು ಮುಂದಾದ. ಆದರೆ ವೈದ್ಯರ ಬಳಿಗೆ ಕರೆದೊಯ್ಯುವ ಬದಲು ಆತ ಆಕೆಯನ್ನು ತನ್ನ ಬೈಕ್‌ನಲ್ಲಿ ಕಾಡಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ, ಕತ್ತು ಹಿಸುಕಲು ಪ್ರಯತ್ನ ಮಾಡಿದ್ದಾನೆ. ಇದರಿಂದ ಮಹಿಳೆಯ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಆಕೆ ಪ್ರಜ್ಞೆ ತಪ್ಪಿದ್ದಾಳೆ. ಪ್ರಜ್ಞೆ ಬಂದಾಗ ಕಾಡಿನಿಂದ ಹೊರಗೆ ಬರಲು ಆಕೆ ಪ್ರಯತ್ನ ಮಾಡಿದ್ದಾಳೆ. ಇಡೀ ರಾತ್ರಿ ಅಲ್ಲೇ ಅಡಗಿಕೊಂಡಿದ್ದಾಳೆ. ಮರುದಿನ ಬೆಳಗ್ಗೆ ಹೇಗೋ ತನ್ನ ಮನೆಗೆ ತಲುಪಿ ತನ್ನ ಕುಟುಂಬಕ್ಕೆ ನಡೆದ ಘಟನೆ ಹೇಳಿದ್ದಾಳೆ.

banner

ಮಹಿಳೆ ನೀಡಿದ ದೂರಿನನ್ವಯ ಈ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಆರೋಪಿ ಕೇಸರಿಯನ್ನು ಬಂಧನ ಮಾಡಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

You may also like