Home » ಕೇಸರಿ ಧ್ವಜದ ಫೋಟೋ ಅಪ್ಲೋಡ್‌, ತಾಯಿ ಮಗನ ಮೇಲೆ ಹಲ್ಲೆ

ಕೇಸರಿ ಧ್ವಜದ ಫೋಟೋ ಅಪ್ಲೋಡ್‌, ತಾಯಿ ಮಗನ ಮೇಲೆ ಹಲ್ಲೆ

0 comments

ಯಾದಗಿರಿ: ಸಾಮಾಜಿಕ ಜಾಲತಾಣದಲ್ಲಿ ಕೇಸರಿ ಧ್ವಜದ ಕುರಿತು ಫೋಟೋ ಹಾಕಿದ್ದಕ್ಕೆ ತಾಯಿ ಮಗನಿಗೆ ಹಲ್ಲೆ ಮಾಡಿದ ಘಟನೆ ಗುರುಮಠಕಲ್‌ ತಾಲೂಕಿನ ಪುಟಪಾಕ್‌ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಶಿವಮಾಲಾಧಾರಿಗಳಿಂದ ಧಾರ್ಮಿಕ ಕಾರ್ಯಕ್ರಮ ನಡೆಸುವ ಕುರಿತು ಕೇಸರಿ ಬಾವುಟಗಳನ್ನು ಅಳವಡಿಸಲಾಗಿತ್ತು. ಈ ಕುರಿತು ಯುವಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದ. ಕೇಸರಿ ಧ್ವಜ ಅಳವಡಿಕೆ ಫೋಟೋ ಮಸೀದಿ ಮೇಲೆ ಇಟ್ಟ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿದ್ದು, ಇದನ್ನು ತಪ್ಪಾಗಿ ಅರ್ಥಸಿಕೊಂಡ ಏಳು ಮಂದಿ ಯುವಕರು ಫೋಟೋ ಸ್ಟೇಟಸ್‌ ಹಾಕಿದ್ದ ರಮೇಶ್‌ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ತಾಯಿ ನಾಗಮ್ಮಳ ಮೇಲೆ ಯುವಕ ಗುಂಪು ಹಲ್ಲೆ ಮಾಡಿದೆ.

ತಾಯಿ ಮಗನ ಮೇಲೆ ಹಲ್ಲೆ ನಡೆಸಿದ ವಿಷಯ ತಿಳಿದು ಮಧ್ಯರಾತ್ರಿಯೇ ಶಿವ ಮಾಲಾಧಾರಿಗಳು ಹಾಗೂ ಗ್ರಾಮಸ್ಥರು ನಡು ರಸ್ತೆಯಲ್ಲಿಯೇ ಶಿವ ಪಾವರ್ತಿ ಅಂಬೇಡ್ಕರ್‌ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿದವರನ್ನು ಕೂಡಲೇ ಬಂಧನ ಮಾಡಬೇಕೆಂದು ಆಗ್ರಹ ಮಾಡಿದರು.

ಈ ಬಗ್ಗೆ ಹಲ್ಲೆಗೊಳಗಾದ ನಾಗಮ್ಮ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಮುಲಾಂಗ, ರಿಯಾಜ್‌, ಖಾಜಾ, ಖಲೀಲ್‌, ಆಸೀಫ್‌, ಖಲೀಂ, ಸಮೀರ್‌ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

banner

You may also like