Home » ಮಂಜೇಶ್ವರ: ಮಗಳ ಹತ್ಯೆ ತಡೆಯಲು ಬಂದ ತಂಗಿ ಗಂಡನೂ ಆಸ್ಪತ್ರೆಯಲ್ಲಿ ಸಾವು

ಮಂಜೇಶ್ವರ: ಮಗಳ ಹತ್ಯೆ ತಡೆಯಲು ಬಂದ ತಂಗಿ ಗಂಡನೂ ಆಸ್ಪತ್ರೆಯಲ್ಲಿ ಸಾವು

0 comments

ಮಂಜೇಶ್ವರ: ಪತ್ನಿ ವಿಚ್ಛೇದನ ಕುರಿತು ಮಾತನಾಡಿದ ಕಾರಣದಿಂದ ಮಗಳ ಕುತ್ತಿಗೆಯನ್ನು ಕಡಿದು ಹತ್ಯೆ ಮಾಡಿದ ಪ್ರಕರಣದಲ್ಲಿ ದಾಳಿ ತಡೆಯಲು ಬಂದು ಕತ್ತಿಯೇಟಿಗೆ ಒಳಗಾಗಿದ್ದ ಪತ್ನಿಯ ಸೋದರಿ ಗಂಡ ಶೇಕುಂಞ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಸೋಮವಾರ ಸಂಜೆ 5 ಗಂಟೆ ಸಮಯದಲ್ಲಿ ಮಂಜೇಶ್ವರ ಠಾಣಾ ವ್ಯಾಪ್ತಿಯ ತುಮ್ಮಿನಾಡಿನಲ್ಲಿ ಈ ಘಟನೆ ನಡೆದಿತ್ತು.

ಆರೋಪಿ ಉಮ್ಮರ್‌ ಫಾರೂಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದೇಶದಲ್ಲಿದ್ದ ಈತ ಮೂರು ತಿಂಗಳ ಹಿಂದಷ್ಟೇ ಬಂದಿದ್ದು, ಪತ್ನಿ ವಿಚ್ಛೇದನ ಕೇಳಿದ್ದು, ಇದಕ್ಕಾಗಿ ಮಾತುಕತೆಗೆ ತಂಗಿ ಮನೆಗೆ ಬಂದಿದ್ದಾರೆ. ಇತ್ತ ಉಮ್ಮರ್‌ ಫಾರೂಕ್‌ ಕತ್ತಿ ಹಿಡಿದು ಬಂದಿದ್ದರೆ, ತಾಹಿರಾ ತನ್ನ ಮಗಳು ಮರಿಯಮ್ಮ ಜುಮೈಲಾ ಜೊತೆ ತಂಗಿ ಮನೆಯಲ್ಲಿದ್ದರು. ಈ ವೇಳೆ ಮಾತುಕತೆ ನಡೆದು, ತನ್ನಲ್ಲಿದ್ದ ಚಿನ್ನಾಭರಣ, ಮನೆಯ ಆಸ್ತಿಪತ್ರಗಳನ್ನು ಉಮರ್‌ ಫಾರೂಕ್‌ ಕೈಗೆ ನೀಡಿದ್ದರು.

ಅಲ್ಲಿಂದ ಹಿಂತಿರುಗುವಾಗ ಪತ್ನಿ ಜೊತೆಗೆ ನಿಂತಿದ್ದ ಮಗಳು ಜುಮೈಲಾ ಮೇಲೆ ತನ್ನ ಕೈಯಲ್ಲಿದ್ದ ಕತ್ತಿಯಿಂದ ಏಕಾಏಕಿ ಕಡಿದಿದ್ದಾನೆ. ಈ ವೇಳೆ ಕಡಿಯಲು ಬಂದ ಪತ್ನಿಯ ತಂಗಿಯ ಗಂಡ ಶೇಕುಂಞ ಮೇಲೂ ಕತ್ತಿಯಿಂದ ದಾಳಿ ನಡೆಸಿದ್ದಾನೆ. ಮಗಳನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಸಾವಿಗೀಡಾಗಿದ್ದು, ಶೇಕುಂಞ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

banner

ಉಮ್ಮರ್‌ ಫಾರೂಕ್‌ ಗಾಂಜಾ ಮಾರಿಜುವಾನಾ ಡ್ರಗ್ಸ್‌ ಸೇವನೆಯ ಚಟ ಹೊಂದಿದ್ದು, ಹಲವಾರು ಕೇಸುಗಳನ್ನು ಹೊಂದಿದ್ದಾನೆ. ಈ ಕಾರಣಕ್ಕೆ ಗಂಡ ಹೆಂಡತಿ ಮಧ್ಯೆ ಜಗಳವಾಗಿತ್ತು. ನಂತರ ಅದು ವಿಚ್ಛೇದನದ ವರೆಗೂ ಹೋಗಿತ್ತು.

 

You may also like