Home » ಮಂಜೇಶ್ವರ: ಕೌಟುಂಬಿಕ ಕಲಹ, ಹೆಂಡ್ತಿ ಡಿವೋರ್ಸ್‌ ಕೇಳಿದ್ದಕ್ಕೆ ಮಗಳ ಕೊಂದ ಅಪ್ಪ

ಮಂಜೇಶ್ವರ: ಕೌಟುಂಬಿಕ ಕಲಹ, ಹೆಂಡ್ತಿ ಡಿವೋರ್ಸ್‌ ಕೇಳಿದ್ದಕ್ಕೆ ಮಗಳ ಕೊಂದ ಅಪ್ಪ

0 comments

Hindu neighbor gifts plot of land

Hindu neighbour gifts land to Muslim journalist

ಮಂಜೇಶ್ವರ: ಹೆಂಡತಿ ವಿಚ್ಛೇದನ ಕೇಳಿದಳು ಎನ್ನುವ ಕಾರಣಕ್ಕೆ ಸಿಟ್ಟುಗೊಂಡ ಗಂಡನೊಬ್ಬ ಆಕೆಯ ಮೇಲಿನ ಸಿಟ್ಟಿಗೆ ತನ್ನ 18 ವರ್ಷದ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೇರಳ ಕರ್ನಾಟಕ ಗಡಿಯಾದ ಕಾಸರಗೋಡಿನ ಮಂಜೇಶ್ವರ ಸಮೀಪ ಕುಂಜತ್ತೂರಿನಲ್ಲಿ ನಡೆದಿದೆ. ಉಮರ್‌ ಪಾಷಾ ಎಂಬ ಆರೋಪಿಯೇ ಹೆಂಡ್ತಿ ಮೇಲಿನ ಸಿಟ್ಟಿಗೆ ಮಗಳನ್ನು ಕೊಲೆ ಮಾಡಿದ ವ್ಯಕ್ತಿ.

ಕುಂಜತ್ತೂರಿನ ತೂಮಿನಾಡು ಹಿಲ್‌ಟಾಪ್‌ ನಗರದ ನಿವಾಸಿಯಾಗಿರುವ ಉಮರ್‌ ಪಾಷಾ ತನ್ನ 18 ವರ್ಷದ ಮಗಳು ಜುಬೈರಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದನ್ನು ತಡೆಯುವುದಕ್ಕೆ ಬಂದ ತನ್ನ ಸ್ವಂತ ಅಣ್ಣ ಶೇಂಕುಞ ಮೇಲೆ ಕೂಡಾ ಹಲ್ಲೆ ಮಾಡಿದ್ದಾನೆ. ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಶೇಕುಂಞ ಅವರಿಗೂ ಗಂಭೀರವಾದ ಗಾಯವಾಗಿದೆ.

ಜುಬೈರಾಳನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಯಿತಾದರೂ, ಆಕೆ ಆಸ್ಪತ್ರೆಗೆ ಬರುವಾಗಲೇ ಸಾವಿಗೀಡಾಗಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ. ಜುಬೈರಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಆರೋಪಿ ವಿಚಾರಣೆ ನಡೆಯುತ್ತಿದೆ.

ಈ ಘಟನೆ ಭಾನುವಾರ ನಡೆದಿದ್ದು, ಉಮರ್‌ ಪಾಷಾ ದಿಢೀರನೆ ಮಗಳ ಮೇಲೆ ದಾಳಿ ಮಾಡಿದ್ದು, ಚಾಕುವಿನಿಂದ ಆಕೆಗೆ ಇರಿದಿದ್ದಾನೆ. ಆಕೆಯ ಕಿರುಚಾಟ ಕೇಳಿ ರಕ್ಷಣೆಗೆ ಬಂದ ದೊಡ್ಡ ಮೇಲೂ ಉಮರ್‌ ಪಾಷಾ ಹಲ್ಲೆ ಮಾಡಿದ್ದಾನೆ. ಶೇಕುಂಞ ಅವರು ಕೂಡಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

banner

ಗಂಡ ಹೆಂಡತಿ ನಡುವಿನ ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಉಮರ್‌ ಪಾಷಾ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಮೂರು ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದ. ಈತನ ಪತ್ನಿ ತಾಹಿರಾ ಆತನಿಂದ ವಿಚ್ಛೇದನ ಪಡೆಯುವುದಕ್ಕೆ ಬಯಸಿದ್ದಳು, ಉಮರ್‌ಗೆ ಮನೆಬಿಟ್ಟು ಹೋಗುವಂತೆ ಹೇಳಿದ್ದಳು.

ಇದರಿಂದ ಉಮರ್‌ ಹತಾಶೆಗೆ ಒಳಗಾಗಿ, ಮಗಳ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಮಾದಕ ವ್ಯಸನಿಯಾಗಿದ್ದ ಉಮರ್‌ ಪಾಷಾ, ಮಾದಕ ದ್ರವ್ಯ ಸೇವಿಸಿದ್ದು, ಅದರ ಅಮಲಿನಲ್ಲಿಯೇ ಕೃತ್ಯ ಮಾಡಿರಬಹುದು ಎಂದು ಶಂಕಿಸಲಾಗಿದೆ.

You may also like