Home » ಮಂಗಳೂರು: ಸುರತ್ಕಲ್‌ ಗ್ಯಾರೇಜ್‌ನಿಂದ ವಾಹನಗಳ ಬಿಡಿಭಾಗ ಕಳವು: ಲಾರಿ ಚಾಲಕನ ಬಂಧನ

ಮಂಗಳೂರು: ಸುರತ್ಕಲ್‌ ಗ್ಯಾರೇಜ್‌ನಿಂದ ವಾಹನಗಳ ಬಿಡಿಭಾಗ ಕಳವು: ಲಾರಿ ಚಾಲಕನ ಬಂಧನ

0 comments

ಮಂಗಳೂರು: ಸುರತ್ಕಲ್‌ ಬಳಿಯ ಹೊಸಬೆಟ್ಟು ಪರಿಸರದ ಗ್ಯಾರೇಜ್‌ ಒಂದರಿಂದ ವಾಹನಗಳ ಬಿಡಿಭಾಗಗಳನ್ನು ಕಳವುಗೈದ ಪ್ರಕರಣದಲ್ಲಿ ರಾಜಸ್ಥಾನ ಮೂಲದ ಲಾರಿ ಚಾಲಕನನ್ನು ಪೊಲೀಸರು ಬಂಧನ ಮಾಡಿದ್ದು, ಕಳವು ಮಾಡಿದ ಸೊತ್ತುಗಳನ್ನು ವಶಪಡಿಸಿದ್ದಾರೆ.

ಫೆ.14 ರಂದು ರಾತ್ರಿ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿ ಬಳಿಯ ಫ್ರೆಂಡ್ಸ್‌ ಗ್ಯಾರೇಜ್‌ ಬಳಿ ದುರಸ್ತಿಗೆಂದು ನಿಲ್ಲಿಸಿದ್ದ ಎರಡು ಘನ ವಾಹನದ ಬಿಡಿಭಾಗಗಳನ್ನು ಕಳವು ಮಾಡಿಕೊಂಡು ತನ್ನ ಈಚರ್‌ ಲಾರಿಯಲ್ಲಿ ಕಳವು ಮಾಡಿ ಪರಾರಿಯಾಗಿದ್ದ. ಈ ಕುರಿತು ಗ್ಯಾರೇಜ್‌ ಮಾಲೀಕರು ನೀಡಿದ ದೂರಿನ ಪ್ರಕಾರ ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಕಳವು ಪ್ರಕರಣದಲ್ಲಿ ತನಿಖೆ ಪ್ರಕಾರ, ಲಾರಿ ಚಾಲಕನಾಗಿರುವ ರಾಜಸ್ಥಾನದ ಜೋಧಪುರ್‌ ಮೂಲದ, ಹಾಲಿ ಬೆಂಗಳೂರು ಬನಶಂಕರಿ ನಿವಾಸಿ ಮುಖೇಶ್‌ ದಾಸ್‌ (46) ಎನ್ನುವಾತನನ್ನು ದಸ್ತಗಿರಿ ಮಾಡಲಾಗಿದ್ದು, ಆತನಿಂದ ಕಳವು ಮಾಡಲಾಗಿರುವ ರೂ.96,000 ಮೌಲ್ಯದ ವಾಹನಗಳ ಬಿಡಿಭಾಗಗಳು ಹಾಗೂ ಕೃತ್ಯಕ್ಕೆ ಬಳಸಿರುವ ಕೆಎ 02 AM 2335 ಈಚರ್‌ ಲಾರಿ ಸೇರಿ ರೂ.15,96,000 ಮೌಲ್ಯದ ವಸ್ತುಗಳನ್ನು ಸ್ವಾಧೀನ ಪಡಿಸಲಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

banner

You may also like