

ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ನಡೆದ ಪ್ರಮುಖ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನೆ, ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಸಿಆರ್ಪಿಎಫ್ ಸೇರಿದಂತೆ ಭದ್ರತಾ ಪಡೆಗಳು ದಟ್ಟವಾದ ಅರಣ್ಯ ಪ್ರದೇಶದೊಳಗಿನ ಗುಹೆಯಲ್ಲಿ ಅಡಗಿಕೊಂಡಿದ್ದ ಇಬ್ಬರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ.
ಭದ್ರತಾ ಪಡೆಗಳು ಪ್ರವೇಶದ್ವಾರವನ್ನು ಸ್ಫೋಟಿಸಲು ಐಇಡಿಗಳನ್ನು ಬಳಸಿದ್ದು, ಇದರಿಂದ ಇವರನ್ನು ಸಾಯಿಸಲು ಸಾದ್ಯವಾಯಿತು ಎಂದು ಮೀರ್ ಫರೀದ್ ಹೇಳಿದರು. ಮೃತರಲ್ಲಿ ಒಬ್ಬನನ್ನು ಉನ್ನತ ಕಮಾಂಡರ್ ಅಬು ಮಾವಿಯಾ ಎಂದು ಗುರುತಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅತ್ಯಾಧುನಿಕ ಡ್ರೋನ್ ಕಣ್ಗಾವಲು ಮತ್ತು ಈ ಹಿಂದೆ ಸೆರೆಹಿಡಿಯುವಿಕೆಯಿಂದ ತಪ್ಪಿಸಿಕೊಂಡಿದ್ದ ಭಯೋತ್ಪಾದಕರನ್ನು ಶಾರ್ಪ್ಶೂಟರ್ಗಳ ಮೂಲಕ ನಿರ್ಮೂಲನೆ ಮಾಡಲಾಯಿತು.













