Home News ಪುತ್ತೂರು : ದರ್ಬೆಯಲ್ಲಿ ಇನ್ನೋವಾ ಚಾಲಕನಿಗೆ ಗುಂಪಿನಿಂದ ಗಂಭೀರ ಹಲ್ಲೆ | ಗಾಯಾಳು ಆಸ್ಪತ್ರೆಗೆ ದಾಖಲು

ಪುತ್ತೂರು : ದರ್ಬೆಯಲ್ಲಿ ಇನ್ನೋವಾ ಚಾಲಕನಿಗೆ ಗುಂಪಿನಿಂದ ಗಂಭೀರ ಹಲ್ಲೆ | ಗಾಯಾಳು ಆಸ್ಪತ್ರೆಗೆ ದಾಖಲು

Hindu neighbor gifts plot of land

Hindu neighbour gifts land to Muslim journalist

ಪುತ್ತೂರು:ಡೀಸೆಲ್ ತುಂಬಿಸಿ, ಗಾಳಿ ಹಾಕಿಸಲೆಂದು ನಿಂತುಕೊಂಡಿದ್ದ ವೇಳೆ ಏಕಾಏಕಿ ಬಂದ ತಂಡವೊಂದು ಇನ್ನೋವಾ ಕಾರು ಚಾಲಕನಿಗೆ ತೀವ್ರ ತರದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ದರ್ಬೆಯ ಪೆಟ್ರೋಲ್ ಪಂಪೊಂದರ ಬಳಿ ಆ.24ರಂದು ರಾತ್ರಿ ನಡೆದಿದೆ.

ವೃತ್ತಿಯಲ್ಲಿ ಪೈಂಟರ್ ಆಗಿರುವ ಕೆಮ್ಮಾಯಿ ನಿವಾಸಿ ರಾಧಾಕೃಷ್ಣ ಎಂಬವರು ಇನ್ನೋವಾ ಕಾರಲ್ಲಿ ಬಂದು ದರ್ಬೆ ಪೆಟ್ರೋಲ್ ಪಂಪಲ್ಲಿ ಇಂಧನ ಹಾಕಿಸಿ ಬಳಿಕ ಅಲ್ಲೇ ಪಕ್ಕದಲ್ಲಿ ಇನ್ನೋವಾಕ್ಕೆ ಗಾಳಿ ಹಾಕಿಸುತ್ತಿದ್ದ ಸಂದರ್ಭ ಏಕಾಏಕಿಯಾಗಿ ಅಲ್ಲಿಗೆ ಬಂದ ಆರರಿಂದ ಏಳು ಮಂದಿಯ ತಂಡ ರಾಧಾಕೃಷ್ಣ ಅವರಿಗೆ ಹಿಗ್ಗಾ ಮುಗ್ಗ ಹಲ್ಲೆ ನಡೆಸಿ ಇನ್ನೋವಾ ಕಾರಿಗೆ ಹಾನಿಗೊಳಿಸಿದ್ದಾರೆ.

ತೀವ್ರ ಹಲ್ಲೆಗೊಳಗಾಗಿರುವ ರಾಧಾಕೃಷ್ಣ ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಇತ್ತ ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿದ ವೇಳೆ ಆರೋಪಿಗಳು ಪರಾರಿಯಾಗಿದ್ದು ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರು ಆರು ಮಂದಿಯನ್ನು ಬನ್ನೂರು ಸಮೀಪ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.