Home » ಉಡುಪಿ ಸೌಹಾರ್ದತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಹಿಂದೂ ಮಹಿಳೆಗಾಗಿ ಕಣ್ಣೀರು ಹಾಕಿದ ಮುಸ್ಲಿಂ ಮಹಿಳೆಯರ ‘ರಹಸ್ಯ’ ಬಯಲು ಮಾಡಿದ ಬಿಜೆಪಿ!!

ಉಡುಪಿ ಸೌಹಾರ್ದತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಹಿಂದೂ ಮಹಿಳೆಗಾಗಿ ಕಣ್ಣೀರು ಹಾಕಿದ ಮುಸ್ಲಿಂ ಮಹಿಳೆಯರ ‘ರಹಸ್ಯ’ ಬಯಲು ಮಾಡಿದ ಬಿಜೆಪಿ!!

0 comments

ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಳಿ ಸ್ವಂತ ಸೂರಿಲ್ಲದೆ ಪರದಾಡುತ್ತಿದ್ದ ಹಿಂದೂ ವೃದ್ಧೆಯೊಬ್ಬರ ಪರವಾಗಿ ಮುಸ್ಲಿಂ ಮಹಿಳೆಯರು ಧ್ವನಿಯೆತ್ತಿ, ನ್ಯಾಯಕ್ಕಾಗಿ ಬೇಡಿ ಕಣ್ಣೀರಿಟ್ಟ ಅಪರೂಪದ ಘಟನೆ ನಡೆದಿತ್ತು. ಇದನ್ನು ಕಂಡ ಹೆಬ್ಬಾಳ್ಕರ್ ಅವರು ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುವವರು ಸಮಾಜದಲ್ಲಿ ಗೋಡೆಗಳನ್ನು ಕಟ್ಟುತ್ತಿದ್ದರೆ, ಇಂತಹ ಸಾಮಾನ್ಯ ಜನರೇ ನಮ್ಮ ದೇಶದ ನಿಜವಾದ ಸೌಹಾರ್ದತೆಯ ರಾಯಭಾರಿಗಳು. ಇದು ನೋಡಿ ನಮ್ಮ ಹೆಮ್ಮೆಯ ಭಾರತ. ಇದನ್ನು ಉಡುಪಿ ಬಿಜೆಪಿಯವರು ಅರಿತುಕೊಳ್ಳಬೇಕು” ಎಂದು ಮಾರ್ಮಿಕವಾಗಿ ನುಡಿದ್ದರು. ಆದರೆ ಇದೀಗ ಈ ಪ್ರಕಾರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮುಸ್ಲಿಂ ಮಹಿಳೆಯರ ರಹಸ್ಯವನ್ನು ಬಿಜೆಪಿ ಬಯಲು ಮಾಡಿದೆ 

ಹೌದು, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಮ್ಮುಖದಲ್ಲಿ ಹಿಂದೂ ಮಹಿಳೆಯ ಕಷ್ಟ ಪರಿಹಾರಕ್ಕೆ ಕಣ್ಣೀರು ಹಾಕಿದ ಮುಸ್ಲಿಂ ಮಹಿಳೆಯರು ನೆರೆಮನೆಯವರಲ್ಲ, ಬದಲಿಗೆ ಆ ವೃದ್ಧೆಯ ಸ್ವಂತ ಮಗಳೇ ಆಗಿದ್ದಾರೆ ಎಂಬ ಆಘಾತಕಾರಿ ಸತ್ಯವನ್ನು ಬಿಜೆಪಿ ಬಯಲಿಗೆಳೆದಿದೆ

ಏನಿದು ಘಟನೆ?

ಬಡಗಬೆಟ್ಟು ಗ್ರಾಮದ ನಿವಾಸಿಯಾದ ಗಿರಿಜಾ ಶೆಟ್ಟಿಗಾರ್ ಎಂಬ ಬಡ ವಿಧವೆ ಮಹಿಳೆಗೆ 1989ರಲ್ಲೇ ನಿವೇಶನ ಯೋಜನೆಯಡಿ 5 ಸೆಂಟ್ಸ್ ಭೂಮಿ ಮಂಜೂರಾಗಿ ಹಕ್ಕು ಪತ್ರ ಸಿಕ್ಕಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಆ ಜಾಗವನ್ನು ‘ಡೀಮ್ಡ್ ಫಾರೆಸ್ಟ್’ (Deemed Forest) ಎಂದು ಸಬೂಬು ಹೇಳಿ ಮನೆ ನಿರ್ಮಿಸಲು ಅಡ್ಡಿಪಡಿಸುತ್ತಿದ್ದರು. ಇದರಿಂದಾಗಿ ಗಿರಿಜಾ ಅವರು ಹಲವು ವರ್ಷಗಳಿಂದ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಯಲ್ಲೇ ವಾಸಿಸುತ್ತಾ ಕಷ್ಟ ಅನುಭವಿಸುತ್ತಿದ್ದರು.

banner

ವೃದ್ಧೆಯ ಈ ಸುದೀರ್ಘ ನೋವನ್ನು ಕಂಡ ನೆರೆಮನೆಯ ಮುಸ್ಲಿಂ ಮಹಿಳೆಯರು, ಉಡುಪಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿಸಿ ಮನವಿ ಸಲ್ಲಿಸಿ ಭಾವುಕರಾಗಿ ಕಣ್ಣೀರು ಹಾಕಿದರು. ಹಿಂದೂ ಮಹಿಳೆಯ ಕಷ್ಟಕ್ಕೆ ಮುಸ್ಲಿಂ ಸಹೋದರಿಯರು ಕಣ್ಣೀರು ಹಾಕುತ್ತಿರುವುದನ್ನು ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಭಾವುಕರಾದರು. ಅಲ್ಲದೆ ತಕ್ಷಣದ ಕ್ರಮಕ್ಕೆ ಸೂಚನೆ:ಕಷ್ಟದಲ್ಲಿರುವ ಗಿರಿಜಾ ಶೆಟ್ಟಿಗಾರ್ ಅವರಿಗೆ ಕಾನೂನುಬದ್ಧವಾಗಿ ಭೂಮಿಯ ವಾಸ್ತವ್ಯ ದೊರಕಿಸಿಕೊಟ್ಟು, ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ತಕ್ಷಣವೇ ಒದಗಿಸುವಂತೆ ಸಚಿವರು ಸ್ಥಳದಲ್ಲೇ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಸೌಹಾರ್ದತೆಯ ಪಾಠ ಮಾಡಿದ್ದರು. ಈ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.ಸಚಿವರ ಈ ಹೇಳಿಕೆಗೆ ತೀಕ್ಷ್ಣವಾಗಿ ಬಿಜೆಪಿ ಪ್ರತಿಕ್ರಿಯಿಸಿದೆ. ಅಲ್ಲದೆ ಈ ಘಟನೆಯ ಹಿಂದಿನ ನೈಜ ಕಥೆಯನ್ನು ಮುನ್ನೆಲೆಗೆ ತಂದಿದೆ. 

ಅಸಹಾಯಕ ವೃದ್ಧ ಮಹಿಳೆ ಗಿರಿಜಾ ಶೆಟ್ಟಿಗಾರ್ ಅವರ ಪರವಾಗಿ ಕಣ್ಣೀರು ಹಾಕಿ ಮನವಿ ಮಾಡಿದ ಮುಸ್ಲಿಂ ಮಹಿಳೆ ಬೇರೆ ಯಾರೂ ಅಲ್ಲ, ಆ ವೃದ್ಧೆಯ ಸ್ವಂತ ಮಗಳೇ ಆಗಿದ್ದಾರೆ. ಸುಮಾರು 25 ವರ್ಷಗಳ ಹಿಂದೆಯೇ ಆಕೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಸ್ವಂತ ಪುತ್ರಿಯೇ ತನ್ನ ತಾಯಿಯನ್ನು ಕರೆತಂದು ಸಹಾಯ ಕೇಳಿದ್ದನ್ನು ಕಾಂಗ್ರೆಸ್ ಮತ್ತು ಸಚಿವರು “ಕೋಮು ಸೌಹಾರ್ದತೆ” ಎಂದು ಬಿಂಬಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.”ಸ್ವಂತ ಮಗಳಾಗಿದ್ದರೂ ಆಕೆಯನ್ನು ಕೇವಲ ನೆರೆಮನೆಯ ಮುಸ್ಲಿಂ ಮಹಿಳೆ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿರುವುದು ಎಷ್ಟು ಸರಿ? ಜಿಲ್ಲೆಗೆ ಅತಿಥಿಯಾಗಿ ಬರುವ ತಮಗೆ ಕೇವಲ ಬಿಟ್ಟಿ ಪ್ರಚಾರದ ತೆವಲು ಅಷ್ಟೇ” ಎಂದು ಬಿಜೆಪಿ ಮಹಿಳಾ ಮೋರ್ಚಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದೆ.

ಅಲ್ಲದೆ  ಶಾಸಕ ಯಶ್ ಪಾಲ್ ಸುವರ್ಣ”ನಿಮ್ಮಿಂದ ನಾವು ಸೌಹಾರ್ದತೆಯ ಪಾಠ ಕಲಿಯಬೇಕಾಗಿಲ್ಲ. ಕೌಟುಂಬಿಕ ಸಂಬಂಧವನ್ನು ಕೋಮು ಸಾಮರಸ್ಯದ ಬಣ್ಣ ಬಳಿದು ರಾಜಕೀಯಗೊಳಿಸುವುದನ್ನು ನಿಲ್ಲಿಸಿ” ಎಂದು ಬಿಜೆಪಿ ನಾಯಕಿಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ,”ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿಯಿಂದ ಬಂದು ಉಡುಪಿಯ ಜನತೆಗೆ ಉಪದೇಶ ಮಾಡುವ ಅಗತ್ಯವಿಲ್ಲ. ಉಡುಪಿಯ ಜನರು ಪ್ರಜ್ಞಾವಂತರು. ಜಿಲ್ಲೆಯ ಐವರೂ ಬಿಜೆಪಿ ಶಾಸಕರು , ಸಂಸದರು ಜಾತಿ, ಮತಗಳ ಭೇದವಿಲ್ಲದೆ ಜನರ ಅಹವಾಲು ಆಲಿಸುತ್ತೇವೆ” ಎಂದು ಕಿಡಿ ಕಾರಿದ್ದಾರೆ. “ಬುರ್ಖಾ ಧರಿಸಿ ಬಂದ ಮಹಿಳೆಯರು ಸಚಿವೆಯನ್ನೇ ಯಾಮಾರಿಸಿದ್ದಾರೆ. ಹಿಜಾಬ್, ಬುರ್ಖಾಧಾರಿಗಳು ಉಡುಪಿ ಜಿಲ್ಲೆಗೆ ಮಾರಕ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ” ಎಂದು ಕಿಡಿ ಕಾರಿದ್ದಾರೆ.

You may also like