ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ಭಾರತದ ಮೇಲೆ ಪರಿಣಾಮ ಬೀರಿದ್ದು, ಈ ಬಿಕ್ಕಟ್ಟು ನಿವಾರಣೆಗೆ ಮೋದಿ ಒಂದು ವರ್ಷ ಚಿನ್ನ ಖರೀದಿಯನ್ನು ಕಡಿಮೆ ಮಾಡಿ, ತೈಲವನ್ನು ಮಿತವಾಗಿ ಬಳಸಿ ಎಂದು ಕರೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ರಾಜ್ಯಾದ್ಯಂತ ಇಂಧನ ಮಾರಾಟಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ (New Guideline) ಪ್ರಕಟಿಸಲಾಗಿದೆ.


ಹೌದು, ರಾಜ್ಯಾದ್ಯಂತ ಇಂಧನ ಮಾರಾಟಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಪ್ರಕಟವಾಗಿದೆ. ಬಂಕ್ಗಳಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ವಾಹನಗಳಿಗೆ ಅನುಗುಣವಾಗಿ ತೈಲ ಪ್ರಮಾಣ ನಿಗದಿ ಮಾಡಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸೂಚಿಸಿದ ಪ್ರಮಾಣದಲ್ಲಿ ಮಾತ್ರ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕುವಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸಮಸ್ಯೆಯ ನಡುವೆಯೇ ಇಲಾಖೆ ಹೊರಡಿಸಿದ ಆದೇಶ ಹಲವು ಆತಂಕಕ್ಕೆ ಕಾರಣವಾಗಿದೆ.
ಹೊಸ ಮಾರ್ಗಸೂಚಿಯಲ್ಲೇನಿದೆ.?
– ವಾಹನಗಳ ಕಂಟೇನರ್ ಗಳಿಗೆ ಗರಿಷ್ಠ ಮಿತಿ 200 ಲೀಟರ್
– ಪೆಟ್ರೋಲ್, ಡೀಸೆಲ್ ಬಾಟಲಿ, ಕ್ಯಾನ್ ಗಳಿಗೆ ಹಾಕುವಂತಿಲ್ಲ
– ಅನಧಿಕೃತ ಕಂಟೇನರ್ ಗಳಿಗೆ ಪೆಟ್ರೋಲ್, ಡೀಸೆಲ್ ಹಾಕುವಂತಿಲ್ಲ
– ಇಂಧನವನ್ನ ವಾಹನಗಳ ಟ್ಯಾಂಕ್ಗಳಿಗೆ ಮಾತ್ರ ತುಂಬಿಸಬೇಕು
– ಚಿಲ್ಲರೆ ಮಾರಾಟದಲ್ಲಿ ಸಗಟು ವ್ಯಾಪಾರ ಮಾಡುವಂತಿಲ್ಲ
– ಸಗಟು ವ್ಯಾಪಾರ ನಿಗದಿತ ಕಡೆ ಗಳಲ್ಲಿ ಮಾತ್ರ ಮಾಡಬೇಕು
– ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ಇಂಧನ ಪೂರೈಸಬೇಕು
– ಕೃಷಿ ಚಟುವಟಿಕೆಗೆ ಅಗತ್ಯಕ್ಕೆ ತಕ್ಕಂತೆ ಡೀಸೆಲ್ ಪೂರೈಸಬೇಕು
– ಕಾಲ ಕಾಲಕ್ಕೆ ಅಧಿಕಾರಿಗಳು ಬಂಕ್ ಗಳಲ್ಲಿ ಪರಿಶೀಲನೆ ಮಾಡಬೇಕು
– ಜಿಲ್ಲಾಧಿಕಾರಿಗಳು ಕಾಲ ಕಾಲಕ್ಕೆ ಮಾನೀಟರ್ ಮಾಡಬೇಕು
ಇನ್ನೂ ಚಿಲ್ಲರೆ ಮಾರಾಟ ಮಾಡುವ ಬಂಕ್ಗಳಿಗೆ ಈ ನಿಯಮ ಅನ್ವಯವಾಗಲಿದೆ. ನಿಯಮ ಮೀರಿದ್ರೆ ಕಾನೂನು ಸಂಕಟ ಎದುರಾಗೋ ಸಾಧ್ಯತೆ ಕೂಡ ಇದೆ.

