ವಂದೇ ಭಾರತ್ ರೈಲು ಭಾರತದ ಅಭಿವೃದ್ಧಿಯ ಸಂಕೇತವೆಂದೆ ಬಣ್ಣಿಸಲಾಗುತ್ತಿದೆ. ಅದು ಚಲಿಸುವಾಗ ಪಕ್ಕದಲ್ಲಿ ನಿಲ್ಲಲು ಕೂಡ ಆಗದು. ಯಾಕೆಂದರೆ ಆ ರೈಲಿನ ಸ್ಪೀಡ್ ಹಾಗಿರುತ್ತದೆ. ಒಮ್ಮೆ ಹೊರಟಿದೆಂದರೆ ಅದು ಮತ್ತೇ ನಿಲ್ಲುವುದು ತನ್ನ ನಿರ್ದಿಷ್ಟ ಗುರಿಯಲ್ಲಿ. ಆದರೆ ಇದೀಗ ದೇಶದಲ್ಲಿ ಮೊದಲ ಬಾರಿಗೆ ವಂದೇ ಭಾರತ್ ರೈಲು ಹಳಿ ತಪ್ಪಿದೆ.


ಮುಂಬೈನಿಂದ ಸೋಲಾಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (ಏ. 27) ಮೊದಲು ಬಾರಿಗೆ ಪುಣೆ ನಿಲ್ದಾಣಕ್ಕೆ ಪ್ರವೇಶಿಸುವಾಗ ಹಳಿ ತಪ್ಪಿದ್ದು, ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.
ಇನ್ನೂ ರೈಲು ಹಳ್ಳಿದ ಹಿನ್ನೆಲೆ ಪುಣೆ ಮಾರ್ಗದಲ್ಲಿ ಪ್ರಮುಖ ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ. 2019ರಲ್ಲಿ ಆರಂಭವಾದ ವಂದೇ ಭಾರತ ರೈಲು, ಅಲ್ಲಿಂದ ಇಲ್ಲಿಯವರೆಗೆ ರೈಲು ಹಳಿ ತಪ್ಪಿದ್ದು ಇದೇ ಮೊದಲ ಘಟನೆ ಎಂದು ಹೇಳಲಾಗುತ್ತಿದೆ.
