Harihar :ನಾಡಿನ ಖ್ಯಾತ ಮಠಗಳಲ್ಲಿ ಒಂದಾದ ಹರಿಹರದ ಪಂಚಮಸಾಲಿ ಮಠದ ಪೀಠಾಧ್ಯಕ್ಷರಾದ ವಚನಾನಂದ ಶ್ರೀಗಳನ್ನು ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ.


ಹರಿಹರ ತಾಲೂಕಿನ ಹನಗವಾಡಿ ಬಳಿಯ ಗುರಪೀಠದಲ್ಲಿ ನಡೆದ ಧರ್ಮದರ್ಶಿ ಸಭೆಯಲ್ಲಿ 12 ಜನ ಧರ್ಮದರ್ಶಿಗಳಿಂದ ಅಂತಿಮ ನಿರ್ಧಾರ ಕೈಗೊಳ್ಳಲಾಗಿದ್ದು, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಅವರನ್ನು ಪದಚ್ಯುತಿ ಮಾಡಿರುವ ಬಗ್ಗೆ ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಬಸವರಾಜ ದಿಂಡೂರ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಟ್ರಸ್ಟ್, ಶ್ರೀಗಳ ಉಚ್ಚಾಟನೆಗೆ 10 ಕಾರಣಗಳನ್ನು ನೀಡಿದೆ.
ಉಚ್ಚಾಟನೆ ಯಾಕೆ?
1. ಬೆಂಗಳೂರಿನ `ಶ್ವಾಸ ಕೇಂದ್ರ’ ಆರಂಭಿಸಿ, ಹರಿಹರದ ಮಠದಿಂದ ದೂರ, ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.
2. ಪೀಠಕ್ಕೆ ಬರುವ ಗುರುಕಾಣಿಕೆ, ಭಕ್ತರ ಕಾಣಿಕೆ ಗೌಪ್ಯವಾಗಿ ಶ್ವಾಸಕೇಂದ್ರಕ್ಕೆ ಬಳಕೆ ಮಾಡುತ್ತಿದ್ದಾರೆ.
3. ವೀರಶೈವ ಲಿಂಗಾಯತ ಸಂಪ್ರದಾಯ ಪಾಲಿಸದೆ, ಅಘೋರಿ, ವಾಮಾಚಾರ ಆಚರಣೆ ಮಾಡುತ್ತಿದ್ದಾರೆ.
4. ಕಾವಿಧರಿಸಿಯೂ ಸಭೆಗಳಲ್ಲಿ ಅತ್ಯಂತ ಕೀಳು ಪದ ಬಳಕೆ ಮಾಡುತ್ತಾರೆ.
5. ಮಕ್ಕಳಿಗೆ ಶೈಕ್ಷಣಿಕ, ಧಾರ್ಮಿಕ ಮಾರ್ಗದರ್ಶನ ಬದಲು ಮಸಾಜ್ಗೆ ಬಳಕೆ ಮಾಡಿಕೊಳ್ಳುತ್ತಾರೆ.
6. ಭಕ್ತರ ಬದಲಿಗೆ ವಿಐಪಿಗಳಿಗಷ್ಟೇ ಸಮಯ ಕೊಡುತ್ತಾರೆ.
7. ಟ್ರಸ್ಟ್ ವತಿಯಿಂದ ಪೂಜಾ ಕಾರ್ಯಗಳಿಗೆ ಉಚಿತವಾಗಿ ನಿಯೋಜಿತಗೊಂಡವರ ಜೊತೆ ಅನುಚಿತ ವರ್ತನೆ ಮಾಡುತ್ತಾರೆ.
8. ಮಠದ ವಾಸ್ತವ್ಯ ಬದಲಿಗೆ ಐಷಾರಾಮಿ ನಗರಗಳ ಪಂಚತಾರಾ ಹೊಟೇಲ್ಗಳಲ್ಲಿ ವಾಸ್ತವ್ಯ ಮಾಡುತ್ತಾರೆ.
9. ತಿಂಗಳುಗಟ್ಟಲೇ ವಿದೇಶ ಪ್ರವಾಸಕ್ಕೆ ತೆರಳುತ್ತಾರೆ.
10. ಪರಿತ್ಯಾಗಿಗಳಾಗಿ ಅಧ್ಯಾತ್ಮಿಕ ಚಿಂತನೆ ಬದಲಿಗೆ ಸುಂದರವಾಗಿ ಕಾಣುವ ಹಂಬಲ ಅವರಿಗಿದೆ. ತಲೆ, ಗಡ್ಡಕ್ಕೆ ಬಣ್ಣ ಹಚ್ಚುತ್ತಾರೆ ಎಂದು ಆರೋಪಿಸಲಾಗಿದೆ

