Home » Kodagu: ಕಾಡಿನಲ್ಲಿ ನಾಪತ್ತೆಯಾದೆನೆಂದು ನಾಟಕವಾಡಿದ್ಲಾ ಕೇರಳ ಯುವತಿ? 4 ದಿನ ಕಾಡಲ್ಲಿದ್ದ ಶರಣ್ಯಳ ಮೇಲೆ ನಕ್ಸಲ್ ಶಂಕೆ!!

Kodagu: ಕಾಡಿನಲ್ಲಿ ನಾಪತ್ತೆಯಾದೆನೆಂದು ನಾಟಕವಾಡಿದ್ಲಾ ಕೇರಳ ಯುವತಿ? 4 ದಿನ ಕಾಡಲ್ಲಿದ್ದ ಶರಣ್ಯಳ ಮೇಲೆ ನಕ್ಸಲ್ ಶಂಕೆ!!

0 comments

Kodagu: ಕೊಡಗಿನ (Kodagu) ತಡಿಯಾಂಡಮೋಳ್‌ ಬೆಟ್ಟದಲ್ಲಿ ಇತ್ತೀಚಿಗೆ ಪ್ರವಾಸಕ್ಕೆ ಬಂದು ನಾಪತ್ತೆಯಾಗಿದ್ದ ಟೆಕ್ಕಿ ಶರಣ್ಯ 4 ದಿನಗಳ ಬಳಿಕ ಪತ್ತೆಯಾಗಿ ಅಚ್ಚರಿ ಮೂಡಿಸಿದ್ರು. ಇದೀಗ ಈ ಕೇಸ್​​ಗೆ ರೋಚಕ ಟ್ವಿಸ್ಟ್ ಎನ್ನುವಂತೆ ಶರಣ್ಯ ನಾಪತ್ತೆಯೇ ಆಗಿರಲಿಲ್ಲ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಯುವತಿ ಸುರಕ್ಷಿತವಾಗಿ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸಂಶಯಗಳು ವ್ಯಕ್ತವಾಗಿವೆ. ದಟ್ಟ ಕಾಡಿನಲ್ಲಿ ನಾಲ್ಕು ದಿನ ಆಹಾರವಿಲ್ಲದೆ ಒಬ್ಬ ಯುವತಿ ಬದುಕುಳಿಯಲು ಸಾಧ್ಯವೇ? ಇದು ಪಬ್ಲಿಸಿಟಿ ಗಿಮಿಕ್ ಇರಬಹುದು ಎಂಬುದು ಒಂದು ಗುಂಪಿನ ವಾದ. ಆಕೆಗೆ ನಕ್ಸಲೈಟ್ ಸಂಪರ್ಕವಿರಬಹುದೇ ಎಂಬ ಗಂಭೀರ ಅಪವಾದಗಳು ಕೇಳಿಬರುತ್ತಿವೆ. ಆಕೆಯನ್ನು ಹುಡುಕಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದೆ, ಈ ನಷ್ಟಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಎದ್ದಿದೆ.

ಅಲ್ಲದೆ ಕಾಡಿನಲ್ಲಿ ನಾಪತ್ತೆಯಾದ ಶರಣ್ಯಾ ಪತ್ತೆಯಾದ ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗಿದೆ. ಬಳಿಕ ತಕ್ಷಣವೇ ಆಕೆಯನ್ನ ಕೇರಳಗೆ ಕಳುಹಿಸಿದ್ದಾರೆ. ತರಾತುರಿಯಲ್ಲಿ ಶರಣ್ಯಾಳನ್ನು ಕಳುಹಿಸಿದ್ದು ಯಾಕೆ? ಪೊಲೀಸರು ಆಕೆಯನ್ನ ಸರಿಯಾಗು ವಿಚಾರಣೆ ನಡೆಸಿಲ್ಲ ಎನ್ನುವ ಆರೋಪ ಕೂಡ ಕೇಳಿ ಬಂದಿದ್ದು, ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎನ್ನುವ ಅನುಮಾನ ಕೂಡ ಮೂಡಿದೆ.

You may also like