Mangaluru : ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಪ್ರತಿ ಬಾರಿಯಂತೆ ಈ ಬಾರಿ ಕೂಡ ಮಂಗಳೂರಿನ ಪ್ರತಿಷ್ಠಿತ ಎಕ್ಸ್ಪರ್ಟ್ ವಿದ್ಯಾ ಸಂಸ್ಥೆ ನಿಂತುಕೊಂಡಿದೆ. 600ರಲ್ಲಿ 598 ಅಂಕ ಪಡೆದ ಮಂಗಳೂರಿನ ಎಕ್ ಪರ್ಟ್ ಪ.ಪೂ. ಕಾಲೇಜಿನ ನಂದನ್ ನಾಯಕ್ ಹಾಗೂ ಸಮನ್ಯೂ ಎಸ್. ಶೆಟ್ಟಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅವರು ನಾಲ್ಕು ವಿಷಯಗಳಲ್ಲಿ ತಲಾ 100 ಅಂಕ ಪಡೆದಿರುತ್ತಾರೆ.


ಉಳಿದಂತೆ ಐವರು ವಿದ್ಯಾರ್ಥಿಗಳು 596 ಅಂಕ ಪಡೆದರೆ, ಮೂವರು ವಿದ್ಯಾರ್ಥಿಗಳು 595, ಐವರು 594 ಅಂಕ, ಐವರು 593, ಆರು ವಿದ್ಯಾರ್ಥಿಗಳು 592 ಅಂಕ, 6 ವಿದ್ಯಾರ್ಥಿಗಳು 591 ಅಂಕ ಮತ್ತು ಎಂಟು ವಿದ್ಯಾರ್ಥಿಗಳು 590 ಅಂಕ ಪಡೆದು ಸಾಧನೆ ಮಾಡಿದ್ದಾರೆ.
600ರಲ್ಲಿ 596 ಅಂಕ ಪಡೆದ ಕಾಲೇಜಿನ ಅಮೋಘ ಬಿ. ಲೋಕ, ಅದಿತಿ ಐ. ರೆಡ್ಡಿ, ಸುಶಾಂನ್ ನಾರಾಯಣ ಬಿಲ್ಲವ, ಅಭಿಷೇಕ್ ಆರ್. ಹನುಮಂತ ಗೌಡರ್ ಹಾಗೂ ದೀಕ್ಷಾ ಶೆಣೈ ತೃತೀಯ ಸ್ಥಾನ ಪಡೆದಿದ್ದಾರೆ. 595 ಅಂಕವನ್ನು ಶ್ರೀವತ್ಸ ಎಂ., ಸುಮೇಧಾ ಎಂ., ಶಾರಂಗಿ ಯು.ಎಸ್., 594 ಅಂಕವನ್ನು ಪ್ರೇರಣಾ ಪಾಟೀಲ್, ಮುಕ್ತಾ ಎಸ್., ಸಮಯ ಎ. ಎಸ್., ನಿಯೋಲಾ ಕ್ರಿಸ್ಟಲ್ ಲೋಬೋ, ವೈಭವ್ ಎನ್. ಶೆಟ್ಟಿ ಗಳಿಸಿದ್ದಾರೆ.
ಮೊದಲ ಹತ್ತು ಸ್ಥಾನವನ್ನು ಸಂಸ್ಥೆಯ 40 ವಿದ್ಯಾರ್ಥಿಗಳು ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ಸಲ ಒಟ್ಟು 1,569 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಶೇ. 100 ಫಲಿತಾಂಶ ದಾಖಲಾಗಿದೆ. 1,425 ಮಂದಿ ವಿಶಿಷ್ಟ ಶ್ರೇಣಿ, 144 ಮಂದಿ ಪ್ರಥಮ ಶ್ರೇಣಿ ಗಳಿಸಿ ಅದ್ಭುತ ಸಾಧನೆ ಗೈದಿದ್ದಾರೆ.

ಪ್ರತೀ ವರ್ಷ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲದೆ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅಪ್ರತಿಮ ಸಾಧನೆ ಮಾಡುತ್ತಿರುವ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ಈ ವರ್ಷವೂ ಸಾಧನೆಯ ಹಾದಿಯ ಮುಂಚೂಣಿಯಲ್ಲಿದೆ. ನಮ್ಮ ವಿದ್ಯಾರ್ಥಿಗಳುಪಿಯುಸಿ ಪರೀಕ್ಷೆಯಲ್ಲಿ ಸಾಧಿಸಿರುವ ಅಮೋಘ ಫಲಿತಾಂಶವು ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆಗೆ ಸಾಕ್ಷಿ, ವಿದ್ಯಾರ್ಥಿಗಳ ಸಾಧನೆ ನಮ್ಮೆಲ್ಲರಿಗೂ ಅಪಾರ ಹೆಮ್ಮೆ ತಂದಿದೆ. ವಿದ್ಯಾರ್ಥಿಗಳ ಈ ಸಾಧನೆ ಅವರ ನಿರಂತರ ಪರಿಶ್ರಮ, ಶಿಕ್ಷಕರ ಸಮರ್ಪಣಾ ಭಾವದ ದುಡಿಮೆ ಮತ್ತು ಪೋಷಕರ ಸಹಕಾರದ ಫಲವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

