Home » ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಚುನಾವಣೆ: ಕಿರಣ್ ಬುಡ್ಡೆಗುತ್ತು ತಂಡಕ್ಕೆ ಭರ್ಜರಿ ಜಯ

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಚುನಾವಣೆ: ಕಿರಣ್ ಬುಡ್ಡೆಗುತ್ತು ತಂಡಕ್ಕೆ ಭರ್ಜರಿ ಜಯ

0 comments

 ಮಂಗಳೂರು: ಜಿಲ್ಲೆಯ ಅತ್ಯಂತ ಹಿರಿಯ ಸಮುದಾಯ ಸಂಘಟನೆಯಾದ ಮಂಗಳೂರಿನ ‘ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ’ದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಯುವ ನಾಯಕ ಕಿರಣ್ ಬುಡ್ಡೆಗುತ್ತು ನೇತೃತ್ವದ ‘ಸಮಗ್ರ ಅಭಿವೃದ್ಧಿ ಸಂಘಟನಾ ಬಳಗ’ ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಜಯಭೇರಿ ಬಾರಿಸಿದೆ.

1978ರಲ್ಲಿ ಪ್ರಾರಂಭವಾಗಿ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಈ ಪ್ರತಿಷ್ಠಿತ ಸಂಘದ ಚುನಾವಣೆಯಲ್ಲಿ ಮತದಾರರು ಯುವ ನಾಯಕತ್ವಕ್ಕೆ ಮಣೆ ಹಾಕಿದ್ದಾರೆ.

You may also like