H Vishwanath: ಅಂತರ್ಜಾತಿ ವಿವಾಹ ವಿಚಾರವಾಗಿ ಮಾತನಾಡುವಾಗ “ದಲಿತ IAS ಅಧಿಕಾರಿಗಳು ಹೆಚ್ಚಾಗಿ ಬ್ರಾಹ್ಮಣ ಹೆಣ್ಣು ಮಕ್ಕಳನ್ನು ಮದುವೆ ಆಗ್ತಿದ್ದಾರೆ” ಎಂದು ಹಳ್ಳಿಹಕ್ಕಿ ವಿಶ್ವನಾಥ್ (vishwanath ) ಹೇಳಿದ್ದಾರೆ.

ವಿಧಾನ ಪರಿಷತ್ ನಲ್ಲಿ ಮರ್ಯಾದಾ ಹತ್ಯೆ ತಡೆ ಮಸೂದೆ ಚರ್ಚೆ ವೇಳೆ ಮಾತನಾಡಿದ ಅವರು, ನಮ್ಮ ದಲಿತ ಐಎಎಸ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಹೆಣ್ಣುಮಕ್ಕಳನ್ನು ಮದುವೆಯಾಗಿದ್ದಾರೆ. ಆ ವಿಚಾರದಲ್ಲಿ ಮೇಲ್ಜಾತಿಯರ ವರ್ತನೆಗಳನ್ನು ಮೆಚ್ಚಲೇಬೇಕು ಎಂದು ಹೇಳಿದ್ದಾರೆ.
ಅಲ್ಲದೆ ತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಸ್ವಂತ ಮಗಳನ್ನೇ ಕೊಲ್ಲುವ ಸ್ಥಿತಿಗೆ ಬಂದು ತಲುಪಿದ್ದೇವೆ. ಇಂತಹ ಘಟನೆಗಳನ್ನು ತಪ್ಪಿಸಬೇಕಾಗಿದೆ. ಅಂತರ್ಜಾತೀಯ ವಿವಾಹ ಸಮಾಜದಲ್ಲಿ ಒಂದು ಅಂತರ್ಯುದ್ಧವನ್ನು ಸೃಷ್ಟಿಸುತ್ತದೆ. ರಾಜಕಾರಣಿಗಳಿಗೆ ಇದೊಂದು ಭಾಷಣದ ಸರಕಾಗಿದೆ. ವೇದಿಕೆ ಮೇಲಿರುವವರೆಗೆ ಇವ ನಮ್ಮವ ಇವ ನಮ್ಮವ ಎಂದು ಹೇಳುತ್ತೇವೆ. ಭಾಷಣ ಮಾಡಿ ವೇದಿಕೆಯಿಂದ ಕೆಳಗಿಳಿದ ಬಳಿಕ ನಮ್ಮವರು ಯಾರಿದ್ದಾರೆ ನೋಡ್ರಪ್ಪ ಎಂದು ಹೇಳುತ್ತೇವೆ. ದಲಿತರನ್ನು ನಾವು ಇನ್ನೂ ಹಿಂದುಗಳೆಂದು ಒಪ್ಪಿಕೊಂಡಿಲ್ಲ. ಯಾರು ದಲಿತರನ್ನು ಸೇರಿಸ್ತಿದ್ದಾರೆ ಹೇಳಿ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು ಸೇರಿದಂತೆ ಕೆಲವರು ಪೋಕ್ಸೋ ಕಾಯ್ದೆಯಲ್ಲಿ ಸಿಲುಕಿಕೊಂಡಿದ್ದಾರೆ. ಪೋಕ್ಸೋ ಕಾಯ್ದೆ ಈಗ ದುರ್ಬಲವಾಗುತ್ತಿದೆ. ಅದನ್ನು ನಾವುಗಳೇ ದುರ್ಬಲಗೊಳಿಸಿದ್ದೇವೆ. ಆ ರೀತಿಯಲ್ಲಿ ಮರ್ಯಾದಾ ಹತ್ಯೆ ಕಾಯ್ದೆ ಆಗಬಾರದು ಎಂದರು. ಈ ಕಾಯ್ದೆಯನ್ನು ಒಳ್ಳೇಯ ಉದ್ದೇಶಕ್ಕಾಗಿ ಜಾರಿ ತಂದಿದೆ. ಆದರೆ ಕಾಯ್ದೆಯ ಪಾಲನೆ ಆಗಬೇಕಾಗಿದೆ ಎಂದು ಹೇಳಿದರು.

