Home » ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್‌ ರೈಲಿನ ಮೇಲೆ ಕಲ್ಲು ತೂರಾಟ: ಯುವಕನ ಬಂಧನ

ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್‌ ರೈಲಿನ ಮೇಲೆ ಕಲ್ಲು ತೂರಾಟ: ಯುವಕನ ಬಂಧನ

0 comments

ಆಲುವಾ ಮಾ 19: ಪ್ರೇಮ ವೈಫಲ್ಯದಿಂದ ಮನನೊಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲೆಸೆದಿದ್ದ 19 ವರ್ಷದ ಯುವಕನನ್ನು ಆಲುವಾ ರೈಲ್ವೆ ಪೊಲೀಸರು ಬಂಧನ ಮಾಡಿದ್ದಾರೆ. ಅಂಕಮಾಲಿ ಪಾರಕ್ಕಡವು ನಿವಾಸಿ ಸುಜಿತ್‌ ಸುರೇಶ್‌ ಬಂಧಿತ ಆರೋಪಿ.

ಮಾರ್ಚ್‌ 7 ರಂದು ಬೆಳಿಗ್ಗೆ 7.15 ರ ಸುಮಾರಿಗೆ ನೆಡುಂಬಾಶೇರಿ ವಿಮಾನ ನಿಲ್ದಾಣದ ಸಮೀಪವಿರುವ ಅಕಪರಂಬು ರೈಲ್ವೆ ಗೇಟ್‌ ಬಳಿ ಈ ಘಟನೆ ನಡೆದಿತ್ತು. ವಂದೇ ಭಾರತ್‌ ರೈಲು ತಿರುವನಂತಪುರದಿಂದ ಮಂಗಳೂರಿಗೆ ತೆರಳುತ್ತಿದ್ದು, ಮೂರು ಬಾರಿ ಕಲ್ಲು ತೂರಲಾಗಿತ್ತು. ಕಲ್ಲೇಟಿನಿಂದಾಗಿ ರೈಲಿನ ಕಿಟಕಿಯ ಗಾಜುಗಳು ಪುಡಿಯಾಗಿತ್ತು.

ಆರೋಪಿಯನ್ನು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಬಂಧನ ಮಾಡಲಾಗಿತ್ತು. ಪೊಲೀಸ್‌ ವಿಚಾರಣೆಯ ವೇಳೆ ಸುಜಿತ್‌ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ರೈಲ್ವೆ ಹಳಿಗಳ ಸಮೀಪವೇ ತನ್ನ ಪ್ರೇಮಿಕಾಳ ಮನೆಯಿದ್ದು, ಆಕೆ ತನ್ನನ್ನು ಬಿಟ್ಟು ಹೋಗಿದ್ದು, ಇದರಿಂದ ಕೋಪ, ಹತಾಶೆಯಿಂದ ರೈಲಿನ ಮೇಲೆ ಕಲ್ಲೆಸೆದಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ.

ರೈಲ್ವೆ ಪೊಲೀಸರು ಆರೋಪಿಯ ವಿರುದ್ಧ ರೈಲ್ವೆ ಕಾಯ್ದೆ 153 ರ ಅಡಿಯಲ್ಲಿ (ಜಾಮೀನು ರಹಿತ ಸೆಕ್ಷನ್‌) ಪ್ರಕರಣ ದಾಖಲು ಮಾಡಿದ್ದಾರೆ.

banner

You may also like