Watermelon : ರಾಜ್ಯಾದ್ಯಂತ ಎಲ್ಲೆಡೆ ಬಿಸಿಲಿನ ಝಳ ಹೆಚ್ಚಾಗಿದೆ. ಬಿಸಿಲದಗೆಯಿಂದ ತಪ್ಪಿಸಿಕೊಳ್ಳಲು ಜನರು ತಂಪು ಪಾನೀಯ ಹಾಗೂ ಹಣ್ಣು ಹಂಪಲುಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಕಲ್ಲಂಗಡಿ ಹಣ್ಣಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅಂತಯೇ ಇಲ್ಲೊಬ್ಬರು ವ್ಯಕ್ತಿ ಕಲ್ಲಂಗಡಿ ಹಣ್ಣನ್ನು ಕೊಂಡು ಹೋಗಿ ಸ್ವಲ್ಪ ಸಮಯ ತಂಪಾಗಲಿ ಎಂದು ಫ್ರಿಡ್ಜ್ ನಲ್ಲಿ ಇಟ್ಟು ತೆಗೆದಾಗ, ಆ ಕಲ್ಲಂಗಡಿ ಹಣ್ಣಿನ ಸ್ಥಿತಿ ಕಂಡು ಶಾಕ್ ಆಗಿದ್ದಾರೆ.

ಯಸ್, ವ್ಯಕ್ತಿಯೊಬ್ಬರು ಸಂಜೆ ಸಮಯದಲ್ಲಿ ಒಂದು ಕಲ್ಲಂಗಡಿ ಹಣ್ಣನ್ನು ಮನೆಗೆ ತರುತ್ತಾನೆ. ಬಳಿಕ ಆ ಹಣ್ಣನ್ನು ಸ್ವಲ್ಪ ಹೊತ್ತು ಫ್ರಿಡ್ಜ್ನಲ್ಲಿ ಇಡುತ್ತಾನೆ. ಇದಾದ ನಂತರ ಹಣ್ಣನ್ನು ಫ್ರಿಡ್ಜ್ನಿಂದ ಹೊರ ತೆಗೆದು, ಕತ್ತರಿಸಲು ಮುಂದಾದಾಗ ಆತನಿಗೆ ಒಂದು ಶಾಕ್ ಎದುರಾಗಿದ್ದು, ಹಣ್ಣಿನ ಮೇಲಿರುವ ಪದರವು ಪೇಪರ್ ಅಥವಾ ಸಿಪ್ಪೆಯಂತೆ ಮೇಲೇಳಲು ಶುರುವಾಗುತ್ತದೆ. ಇದನ್ನು ಅವರು ವಿಡಿಯೋ ಮಾಡಿ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ವಿಡಿಯೋ ಶೇರ್ ಮಾಡಿರುವ ಆ ವ್ಯಕ್ತಿ , ತಮ್ಮ ಆಕ್ರೋಶವನ್ನು ಹೊರಹಾಕಿದ್ದಾನೆ. ಅಲ್ಲದೆ ನಿಜವಾಗಿಯೂ ಶುದ್ಧವಾದ ಯಾವುದೇ ವಸ್ತು ಈಗ ಲಭ್ಯವಿದೆಯೇ? ಅಥವಾ ನಾವೆಲ್ಲರು ಆಹಾರದ ಹೆಸರಿನಲ್ಲಿ ರಾಸಾಯನಿಕಗಳನ್ನು ಸೇವಿಸುತ್ತಿದ್ದೇವೆಯೇ? ಎಂದು ಪ್ರಶ್ನಿಸುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಲ್ಲಂಗಡಿ ಸಿಪ್ಪೆಯಂತೆ ಸುಲಿದಿದ್ದೇಕೆ?
ಕಲ್ಲಂಗಡಿ ಸಿಪ್ಪೆಯಂತೆ ಸುಲಿದಿದ್ದೇಕೆ ಎಂಬ ಪ್ರಶ್ನೆಗೆ ಗ್ರೋಕ್ ಎಐ ಉತ್ತರ ನೀಡಿದೆ. ಅದರ ಪ್ರಕಾರ, ಕಲ್ಲಂಗಡಿಗಳು ತುಂಬಾ ತಣ್ಣಗಾದಾಗ ಅಥವಾ ಫ್ರೀಜರ್ ಕಂಪಾರ್ಟ್ಮೆಂಟ್ನಲ್ಲಿ ಹೆಪ್ಪುಗಟ್ಟಿದಾಗ ಸಿಪ್ಪೆ ಸುಲಿಯುವುದು ಸಾಮಾನ್ಯ ಪರಿಣಾಮ ಎಂದಿದೆ. ಕಲ್ಲಂಗಡಿ ಚರ್ಮದ ಹೊರ ಪದರಗಳ ನಡುವೆ ಐಸ್ ಸ್ಫಟಿಕಗಳು ರೂಪುಗೊಳ್ಳುತ್ತವೆ. ನಂತರ, ಅದು ಕೋಣೆಯ ಉಷ್ಣಾಂಶಕ್ಕೆ ಕರಗಿದಾಗ ಚರ್ಮವನ್ನು ಬೇರ್ಪಡಿಸುತ್ತವೆ. ಇದಕ್ಕೆ ರಾಸಾಯನಿಕ ಕಾರಣವಲ್ಲ ಎಂದು ಗ್ರೋಕ್ ಹೇಳಿದೆ.

