Bengaluru : ಯುಗಾದಿ ಮತ್ತು ರಂಜಾನ್ ಪ್ರಯುಕ್ತ ಬಸ್ ಟಿಕೆಟ್ (Bus Ticket) ಹೆಚ್ಚಳ ಹಿನ್ನೆಲೆ, ಬಸ್ನಲ್ಲಿ ಸೀಟ್ ಸಿಗ್ತಿಲ್ಲ ಅಂತಾ ವ್ಯಕ್ತಿಯನ್ನೇ ಕೋರಿಯರ್ನಲ್ಲಿ ಪಾರ್ಸೆಲ್ ಮಾಡಿ ಸೋಶಿಯಲ್ ಮೆಸೇಜ್ ಕೊಡಲು ಹೋಗಿದ್ದ ಕುಟುಂಬ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.

ಏನಿದು ಪಾರ್ಸ್ಲ್ ಪ್ರ್ಯಾಂಕ್ ಸ್ಟೋರಿ?
ಯುಗಾದಿ ಮತ್ತು ರಂಜಾನ್ ಪ್ರಯುಕ್ತ ಬಸ್ ಟಿಕೆಟ್ ಹೆಚ್ಚಳ ಹಿನ್ನೆಲೆ ಬಸ್ನಲ್ಲಿ ಸೀಟ್ ಸಿಕ್ತಾ ಇಲ್ಲ ಎಂದು ಒಂದು ಕುಟುಂಬ ಪ್ರ್ಯಾಂಕ್ ನಾಟಕವಾಡಿತ್ತು. ನಿನ್ನೆ ಸಂಜೆ ಬಿಳಿಬಣ್ಣದ ಮೂಟೆಯೊಂದಿಗೆ ನಾಲ್ವರು ವೈಯಾಲಿಕಾವಲ್ನಲ್ಲಿರುವ ಕೊರಿಯರ್ ಆಫೀಸ್ಗೆ ಬಂದಿದ್ದರು. ಇದನ್ನು ಮಂಗಳೂರಿಗೆ ಕಳುಹಿಸಬೇಕೆಂದು ಕೊರಿಯರ್ ಸಿಬ್ಬಂದಿಗೆ ಹೇಳಿದ್ದಾರೆ. ಮೂಟೆ ಅಲುಗಾಡ್ತಿರೋದು ನೋಡಿ ಕೊರಿಯರ್ ಕಚೇರಿಯಲ್ಲಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಗಾಬರಿಯಾಗಿದ್ದಾರೆ.
ಮೂಟೆಯಲ್ಲಿದ್ದ ವ್ಯಕ್ತಿ ಉಸಿರಾಟದ ತೊಂದರೆಯಿಂದ ಒದ್ದಾಡ್ತಿದ್ದರು, ಬಳಿಕ ಸಿಬ್ಬಂದಿ ಚೀಲ ಓಪನ್ ಮಾಡಿ ನೀರು ಕುಡಿಸಿದ್ದಾರೆ. ಬಳಿಕ ಕೋರಿಯರ್ ಆಫೀಸ್ ಸಿಬ್ಬಂದಿ ಈ ರೀತಿಯಲ್ಲಿ ಕೊರಿಯರ್ ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ. ಈ ವೇಳೆ ಕುಟುಂಬದವರು ಕೊರಿಯರ್ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದ್ದಿದ್ದರು. ಅಮೌಂಟ್ ಕೊಡ್ತೀವಿ ಪಾರ್ಸಲ್ ಮಾಡಿ ಎಂದು ಪಟ್ಟು ಹಿಡಿದ್ದಿದ್ದರು. ಈ ವೇಳೆ ಪೊಲೀಸರಿಗೆ ಸಿಬ್ಬಂದಿ ಕರೆ ಮಾಡುತ್ತಿದ್ದಂತೆ ನಂತರ ಅಲ್ಲಿಂದ ಎಲ್ಲರೂ ಎಸ್ಕೇಪ್ ಆಗಿದ್ದಾರೆ.
ಐವರನ್ನು ಕರೆಸಿ ವಿಚಾರಣೆ ನಡೆಸಿದಾಗ ಒಂದೇ ಕುಟುಂಬದವರು ಸೇರಿಕೊಂಡು ಪ್ರ್ಯಾಂಕ್ ಮಾಡಿರುವುದು ಗೊತ್ತಾಗಿದೆ. ಯುಗಾದಿ ಮತ್ತು ರಂಜನ್ ಹಬ್ಬ ಒಟ್ಟಿಗೆ ಬಂದಿದೆ. ಹೀಗಾಗಿ ಬಸ್ನಲ್ಲಿ ಸೀಟ್ ಸಿಗಲ್ಲ ಅನ್ನೋ ಕಾರಣಕ್ಕೆ ವ್ಯಕ್ತಿಯನ್ನು ಪಾರ್ಸೆಲ್ ಮಾಡುವ ವಿಷಯ ಇಟ್ಟುಕೊಂಡು ವಿಡಿಯೋ ಮಾಡಲು ಈ ರೀತಿ ಮಾಡಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಅದಕ್ಕೆ ಪೊಲೀಸರು ಈ ರೀತಿ ಒಬ್ಬ ವ್ಯಕ್ತಿಯನ್ನ ಚೀಲದಲ್ಲಿ ತರೋದು ತಪ್ಪು ಅನ್ನೋದು ಗೊತ್ತಿಲ್ವಾ? ನಿಮ್ಮ ಹುಡುಗಾಟಕ್ಕೆ ಚೀಲದಲ್ಲಿದ್ದ ವ್ಯಕ್ತಿ ಉಸಿರುಗಟ್ಟಿ ಸತ್ತಿದ್ರೆ, ಇಲ್ಲ ಆರೋಗ್ಯ ಸಮಸ್ಯೆ ಆಗಿದ್ರೇ ಯಾರು ಹೊಣೆ? ಒಂದು ವೇಳೆ ಕೊರಿಯರ್ ಕಚೇರಿಯ ಸಿಬ್ಬಂದಿಗೆ ಏನಾದರೂ ಆಗಿದ್ರೇ ಯಾರು ಹೊಣೆ? ರೀಲ್ಸ್ಗಾಗಿ ಈ ರೀತಿ ಹುಡುಕಾಟ ಮಾಡೋದು ಸರಿನಾ? ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನು, ಇಷ್ಟೆಲ್ಲಾ ಘಟನೆ ಆದ ಬಳಿಕ ಪ್ರ್ಯಾಂಕ್ ಮಾಡಿದ್ದ ಕುಟುಂಬ ಪೊಲೀಸ್ ಸ್ಟೇಷನಲ್ಲೇ ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾರೆ. ಬಸ್ನಲ್ಲಿ ಸೀಟ್ ಸಿಗ್ತಿಲ್ಲ, ಎಲ್ಲವೂ ರಶ್ ಇದೆ. ಹೀಗಾಗಿ ಪಾರ್ಸಲ್ ಮಾಡೋ ನೆಪದಲ್ಲಿ ಒಂದು ಪ್ರ್ಯಾಂಕ್ ರೀತಿಯಲ್ಲಿ ಮಾಡಿದ್ದೇವು, ಸೋಶಿಯಲ್ ಮೆಸೇಜ್ ಕೊಡಲು ಹೀಗೆ ಮಾಡಿದ್ವಿ, ಇದು ತಪ್ಪು ಎಂದು ನಮಗೆ ಗೊತ್ತಾಗಿದೆ ಎಂದು ವಿಡಿಯೋ ಮಾಡಿ ಹೇಳಿದ್ದಾರೆ.

