Home » ಕಾರಿಗೆ ಕಾರು ಡಿಕ್ಕಿ: ಚಾಲಕ ವಶಕ್ಕೆ, ಅಮಲು ಪದಾರ್ಥ ಸೇವನೆ ಶಂಕೆ

ಕಾರಿಗೆ ಕಾರು ಡಿಕ್ಕಿ: ಚಾಲಕ ವಶಕ್ಕೆ, ಅಮಲು ಪದಾರ್ಥ ಸೇವನೆ ಶಂಕೆ

0 comments

Hindu neighbor gifts plot of land

Hindu neighbour gifts land to Muslim journalist

ಸುಳ್ಯ ಸಮೀಪದ ಬೊಳುಬೈಲಿನಲ್ಲಿ ಎದುರಿನಿಂದ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಕಾರೊಂದು ನಿಯಂತ್ರಣ ತಪ್ಪಿ ಗುದ್ದಿದ ಪರಿಣಾಮ ಎದುರಿನಲ್ಲಿದ್ದ ಕಾರಿನಲ್ಲಿದ್ದ ಐವರು ಗಾಯಗೊಂಡ ಘಟನೆ ನಡೆದಿದೆ.

ಹಿಂಬದಿಯಿಂದ ಬಂದ ಕಾರು ಚಾಲಕ ಅಮಲು ಪದಾರ್ಥ ಸೇವಿಸಿರುವುದಾಗಿ ವರದಿಯಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ನಡೆಸಿದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.

ಸುಳ್ಯ ಜಯನಗರದ ಕುಕ್ಕೆ ಶ್ರೀ ವಸಂತ ಎನ್ನುವವರು ಪತ್ನಿ, ಮಕ್ಕಳ ಜೊತೆ ಮಡಂತ್ಯಾರಿಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅವರ ಹಿಂಬದಿಯಿಂದ ಬಂದ ಕಾರು ಪೇರಾಲು ಉದ್ದಂತಡ್ಕ ಮಂಜುನಾಥ ಎನ್ನುವರು ಚಲಾಯಿಸುತ್ತಿದ್ದು, ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನ ಕಾರಿಗೆ ಗುದ್ದಿತ್ತು. ಪಕ್ಕದ ವಿದ್ಯುತ್‌ ಕಂಬಕ್ಕೂ ಗುದ್ದಿದೆ.

ಪರಿಣಾಮ ಕುಕ್ಕೆ ಶ್ರೀವಸಂತ ಹಾಗೂ ಅವರ ಕಾರಿನಲ್ಲಿದ್ದವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದರು.

banner

ಅಪಘಾತ ಮಾಡಿದ ಮಂಜುನಾಥ್‌ ಅವರು ಅಮಲು ಸೇವಿಸಿದ್ದಾಗಿಯೂ ವರದಿಯಾಗಿದೆ. ತಾನು ಏನು ಮಾತನಾಡುತ್ತಿದ್ದೇನೆ ಎನ್ನುವುದರ ಅರಿವು ಅವರಿಗಿರಲಿಲ್ಲ. ಜನರು ಮಂಜುನಾಥ್‌ ಅವರನ್ನು ಕಾರಿನಿಂದ ಇಳಿಯಲು ಬಿಡಲಿಲ್ಲ. ಪೊಲೀಸರು ಬಂದ ಬಳಿಕ ಮಂಜುನಾಥ್‌ ಹಾಗೂ ಕಾರಿನ ಹಿಂಬದಿ ಕುಳಿತಿದ್ದ ಜಯರಾಮ ಎನ್ನುವಾತನನ್ನು ವಶಕ್ಕೆ ಪಡೆದರು.

You may also like