Home Education Pan Card : ಏ. 1ರಿಂದ ಪಾನ್ ಕಾರ್ಡ್ ನಿಯಮದಲ್ಲಿ ಮಹತ್ವದ ಬದಲಾವಣೆ – ಇನ್ಮುಂದೆ...

Pan Card : ಏ. 1ರಿಂದ ಪಾನ್ ಕಾರ್ಡ್ ನಿಯಮದಲ್ಲಿ ಮಹತ್ವದ ಬದಲಾವಣೆ – ಇನ್ಮುಂದೆ ಇದೆಲ್ಲದಕ್ಕೂ ಪಾನ್ ಅತ್ಯಗತ್ಯ

Hindu neighbor gifts plot of land

Hindu neighbour gifts land to Muslim journalist

Pan Card : ಕೇಂದ್ರ ಸರ್ಕಾರವು ಆದಾಯ ತೆರಿಗೆ ಕಾಯ್ದೆಯನ್ನು ಸಂಪೂರ್ಣವಾಗಿ ಪರಿಷ್ಕರಿಸಿದ ಕಾರಣ ಪ್ಯಾನ್ ಕಾರ್ಡ್ ನಿಯಮದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಇದು ಏಪ್ರಿಲ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.

ಹೌದು, ಬ್ಯಾಂಕ್​ಗಳಲ್ಲಿ ನಗದು ಠೇವಣಿ ಇಡುವುದು, ವಿತ್​ಡ್ರಾ ಮಾಡುವುದು, ಮೋಟಾರು ವಾಹನಗಳ ಖರೀದಿ, ಹೋಟೆಲ್ ಬಿಲ್ ಪಾವತಿಯಂತಹ ವಹಿವಾಟುಗಳಿಗೆ ಪ್ಯಾನ್ ಸಂಖ್ಯೆಯನ್ನು ನಮೂದಿಸುವ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಲು ಹೊಸ ಕರಡು ಆದಾಯ ತೆರಿಗೆ ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. ಇದರ ಅನ್ವಯ ಇನ್ನು ಮುಂದೆ ಪ್ಯಾನ್ ಕಾರ್ಡ್ ಕೇವಲ ತೆರಿಗೆ ಉದ್ದೇಶಕ್ಕೆ ಸೀಮಿತವಾಗದೆ, ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ವ್ಯವಹಾರ ನಡೆಸಲು ‘ಏಕೈಕ ವ್ಯಾಪಾರ ಗುರುತಿನ ಚೀಟಿ’ ಆಗಿ ಬಳಕೆಯಾಗಲಿದೆ.

ಪ್ರಸ್ತುತ, ಬ್ಯಾಂಕ್​ಗಳಲ್ಲಿ ಒಂದೇ ದಿನದಲ್ಲಿ 50,000 ರೂ.ಗಿಂತ ಹೆಚ್ಚಿನ ನಗದು ವ್ಯವಹಾರಕ್ಕೆ ಪ್ಯಾನ್ ಸಂಖ್ಯೆ ಅಗತ್ಯವಿತ್ತು.  ಆದರೆ ಪ್ರಸ್ತಾವಿತ ‘ಆದಾಯ ತೆರಿಗೆ ನಿಯಮಗಳು 2026’ರ ಪ್ರಕಾರ, ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದಲ್ಲಿ ತನ್ನ ಒಂದು ಅಥವಾ ಹೆಚ್ಚಿನ ಖಾತೆಗಳಲ್ಲಿ ಒಟ್ಟು 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ಠೇವಣಿ ಅಥವಾ ಹಿಂಪಡೆಯುವಿಕೆ ಮಾಡಿದರೆ ಮಾತ್ರ ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಲಿದೆ.

ವಾಹನಗಳ ಖರೀದಿ ವಿಷಯದಲ್ಲಿಯೂ ದೊಡ್ಡ ಬದಲಾವಣೆ ತರಲಾಗಿದ್ದು, ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ಮೋಟಾರು ವಾಹನಗಳ ಬೆಲೆ 5 ಲಕ್ಷ ರೂ. ಮೀರಿದರೆ ಮಾತ್ರ ಪ್ಯಾನ್ ವಿವರ ನೀಡಬೇಕಾಗುತ್ತದೆ. ಪ್ರಸ್ತುತ ಜಾರಿಯಲ್ಲಿರುವ 1962ರ ನಿಯಮಗಳಲ್ಲಿ ದ್ವಿಚಕ್ರವಾಹನ ಖರೀದಿಗೆ ಪ್ಯಾನ್ ಅವಶ್ಯಕತೆ ಇರಲಿಲ್ಲ. ಆದರೆ ಕಾರುಗಳ ಖರೀದಿಗೆ ಬೆಲೆಯ ಮಿತಿ ಇಲ್ಲದೆ ಪ್ಯಾನ್ ಕಡ್ಡಾಯವಾಗಿತ್ತು. ಅದೇ ರೀತಿ, ಹೋಟೆಲ್ ಅಥವಾ ರೆಸ್ಟೋರೆಂಟ್ ಬಿಲ್​ಗಳು 1 ಲಕ್ಷ ರೂ. ದಾಟಿದರೆ ಮಾತ್ರ ಪ್ಯಾನ್ ನೀಡಬೇಕು. ಈ ಮೊದಲು ಇದರ ಮಿತಿ 50,000 ರೂ. ಆಗಿತ್ತು. ಸ್ಥಿರಾಸ್ತಿಗಳ ಖರೀದಿ, ಮಾರಾಟ ಅಥವಾ ಗಿಫ್ಟ್​ಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಈಗಿರುವ 10 ಲಕ್ಷ ರೂ. ಮಿತಿಯನ್ನು 20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಅಲ್ಲದೆ ಇನ್ನು ಮುಂದೆ ಯಾವುದೇ ವಿಮಾ ಕಂಪನಿಯಲ್ಲಿ ಹೊಸ ಅಕೌಂಟ್ ತೆರೆಯಲು ಪಾನ್ ಕಾರ್ಡ್ ಕಡ್ಡಾಯವಾಗಲಿದೆ. ಇದರ ಜೊತೆಗೆ ಕ್ರಿಪ್ಟೋ ಕರೆನ್ಸಿ ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾ ಇಡಲು ಸರ್ಕಾರ ನಿರ್ಧರಿಸಿದೆ. ಡಿಜಿಟಲ್ ರೂಪಾಯಿ ಅಥವಾ CBDC ಮೂಲಕ ಮಾಡುವ ಪಾವತಿಗಳನ್ನೂ ಇನ್ನು ಮುಂದೆ ಅಧಿಕೃತ ಎಲೆಕ್ಟ್ರಾನಿಕ್ ಪಾವತಿ ಎಂದು ಪರಿಗಣಿಸಲಾಗುತ್ತದೆ. ಈ ಎಲ್ಲಾ ನಿಯಮಗಳು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿವೆ. ಸದ್ಯಕ್ಕೆ ಇವುಗಳು ಕರಡು ಹಂತದಲ್ಲಿದ್ದು, ಸಾರ್ವಜನಿಕರ ಅಭಿಪ್ರಾಯದ ನಂತರ ಅಂತಿಮಗೊಳ್ಳಲಿವೆ.